Advertisement

Arundhathi Nair: ಭೀಕರ ರಸ್ತೆ ಅಪಘಾತ; ಸಾವು – ಬದುಕಿನ ಹೋರಾಟದಲ್ಲಿ ಖ್ಯಾತ ನಟಿ

02:23 PM Mar 18, 2024 | Team Udayavani |

ತಿರುವನಂತಪುರಂ: ಭೀಕರ ಅಪಘಾತ ಸಂಭವಿಸಿ ಖ್ಯಾತ ನಟಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ.

Advertisement

ತಮಿಳು ಮತ್ತು ಮಲಯಾಳಂ ನಟಿ ಅರುಂಧತಿ ನಾಯರ್ ಅಪಘಾತಕ್ಕೆ ಒಳಗಾಗಿರುವ ನಟಿ. ಗುರುವಾರ ರಾತ್ರಿ(ಮಾ.14 ರಂದು) ಕೋವಲಂ ಬೈಪಾಸ್‌ನಲ್ಲಿ ಈ ಅಪಘಾತ ಸಂಭವಿಸಿದೆ.

ಅರುಂಧತಿ ಅವರು ಯೂಟ್ಯೂಬ್‌ ಚಾನೆಲ್‌ ವೊಂದಕ್ಕೆ ಸಂದರ್ಶನ ನೀಡಿ ಬೈಕ್‌ ನಲ್ಲಿ ತನ್ನ ಸಹೋದರನೊಂದಿಗೆ ವಾಪಾಸಾಗುತ್ತಿದ್ದರು. ಈ ವೇಳೆ ವಾಹನವೊಂದು ಢಿಕ್ಕಿ ಹೊಡೆದು ನಿಲ್ಲಿಸದೆ ಸಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಅರುಂಧತಿ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿ ಆಗಿದೆ.

ತಲೆಗೆ ಏಟಾಗಿ, ಅರ್ಧ ಗಂಟೆಯವರೆಗೂ ರಸ್ತೆಯಲ್ಲಿ ಇಬ್ಬರು ಬಿದ್ದಿದ್ದರು ಎಂದು ವರದಿ ತಿಳಿಸಿದೆ.

ಮಾ. 18 ರಂದು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸಹೋದರಿ ಆರತಿ ನಾಯರ್‌ ಮಾಹಿತಿ ನೀಡಿದ್ದಾರೆ. “ಅರುಂಧತಿ ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಅವರು ತಿರುವನಂತಪುರದ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದಾರೆ. ಆಕೆಯ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿ” ಎಂದು ಹೇಳಿದ್ದಾರೆ.

Advertisement

ಅರುಂಧತಿ ಅವರು 2014 ರಲ್ಲಿ ‘ಪೊಂಗಿ ಎಜು ಮನೋಹರ’ ಚಿತ್ರದ ಮೂಲಕ ಕಾಲಿವುಡ್‌ ಗೆ ಪಾದಾರ್ಪಣೆ ಮಾಡಿದರು. ವಿಜಯ್ ಆಂಟೋನಿ ಅವರ ‘ಸೈತಾನ್’ ಚಿತ್ರದ ಮೂಲಕ ಖ್ಯಾತಿಯನ್ನು ಪಡೆದರು. 2018 ರಲ್ಲಿ, ಅವರು ‘ಒಟ್ಟಕೋರು ಕಾಮುಕನ್’ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಕೊನೆಯದಾಗಿ 2023 ರಲ್ಲಿ ತಮಿಳು ಚಿತ್ರ ‘ಆಯಿರಂ ಪೊರ್ಕಾಸುಕಲ್’ ನಲ್ಲಿ ಕಾಣಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next