Advertisement

ಪದ್ಮಾವತ್‌ : ಅಂಬಾಲಾದಲ್ಲಿ ರಾಜಪೂತ ಯುವ ದಳದಿಂದ ಪ್ರತಿಭಟನೆ

05:35 PM Jan 20, 2018 | Team Udayavani |

ಅಂಬಾಲಾ : ರಾಜಪೂತ ಯುವ ದಳದ ಕಾರ್ಯಕರ್ತರು ಇಂದು ಅಂಬಾಲಾ ಕಂಟೊನ್‌ಮೆಂಟ್‌ನಲ್ಲಿ “ಪದ್ಮಾವತ್‌ ‘ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರಲ್ಲದೆ ಚಿತ್ರವನ್ನು ಪ್ರದರ್ಶಿಸದಂತೆ ಚಿತ್ರ ಮಂದಿರಗಳ ಮಾಲಕರಿಗೆ ಬೆದರಿಕೆ ಹಾಕಿದರು. 

Advertisement

ಜನವರಿ 25ರಂದು ಪದ್ಮಾವತ್‌ ಚಿತ್ರವನ್ನು ಪ್ರದರ್ಶಿಸಿದ್ದೇ ಆದಲ್ಲಿ ಚಿತ್ರಮಂದಿರಗಳನ್ನು ಧ್ವಂಸ ಮಾಡಲಾಗುವುದೆಂದು ರಾಜಪೂತ ಯುವ ದಳದ ರಾಷ್ಟ್ರೀಯಸಂಚಾಲಕ ಜಿತೇಂದ್ರ ರಾಣಾ ಎಚ್ಚರಿಕೆ ನೀಡಿದರು. 

ಪದ್ಮಾವತ್‌ ಚಿತ್ರ ಪ್ರದರ್ಶನಕ್ಕೆ ರಾಜಪೂತ ಯುವ ದಳ ಎಷ್ಟು ಮಾತ್ರಕ್ಕೂ ಅವಕಾಶ ನೀಡುವುದಿಲ್ಲ ಎಂದು ರಾಣಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next