Advertisement

ಗಂಗಾ ಉಳಿಸಲು 109 ದಿನ ಉಪವಾಸ ಕೈಗೊಂಡ ಜಿಡಿ ಅಗರ್‌ವಾಲ್‌ ಇನ್ನಿಲ್ಲ

05:45 PM Oct 11, 2018 | udayavani editorial |

ಉತ್ತರಾಖಂಡ : ಸರಕಾರ ಗಂಗಾ ಶುದ್ಧೀಕರಣ ಕೈಗೊಳ್ಳಬೇಕೆಂದು ಆಗ್ರಹಿಸಿ ಕಳೆದ ಜೂನ್‌ 22ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಮಾಜ ಕಾರ್ಯಕರ್ತ ಜಿ ಡಿ ಅಗರ್‌ವಾಲ್‌ ಅವರಿಂದು ಉತ್ತರಾಖಂಡದ ಹೃಷೀಕೇಶದಲ್ಲಿನ ಏಮ್ಸ್‌ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 

Advertisement

ಸ್ವಾಮಿ ಜ್ಞಾನ ಸ್ವರೂಪ ಸನಂದ್‌ ಎಂದೂ ತಿಳಿಯಲ್ಪಟ್ಟಿರುವ ಪರಿಸರವಾದಿ ಅಗರ್‌ವಾಲ್‌ ಅವರು ಗಂಗಾ ನದಿ ಉಳಿಸುವ ಸಲುವಾಗಿ 109 ದಿನಗಳ ಉಪವಾಸ ನಡೆಸಿದ್ದಾರೆ. 

ನಿರಶನ ನಿರತ ಅಗರ್‌ವಾಲ್‌ ಅವರನ್ನು ನಿನ್ನೆ ಬುಧವಾರ ಉತ್ತರಾಖಂಡ ಪೊಲೀಸರು ಬಲವಂತವಾಗಿ ಎತ್ತಿ ಆಸ್ಪತ್ರೆಗೆ ಸೇರಿಸಿದ್ದರು.

ಅಗರ್‌ವಾಲ್‌ ಅವರು ಐಐಟಿ ಕಾನ್ಪುರದಲ್ಲಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾಗಿಯೂ ಅವರು ದುಡಿದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next