Advertisement

ವಾಹನ ಕಳ್ಳನೆಂದು ಹೊಡೆದು ಹತ್ಯೆ: ನಾಲ್ವರು ಪೊಲೀಸರ ವಿರುದ್ದ ಕ್ರಮ

12:16 PM Sep 17, 2018 | Team Udayavani |

ಇಂಪಾಲ : ವಾಹನ ಕಳ್ಳನೆಂಬ ಶಂಕೆಯಲ್ಲಿ 26ರ ಹರೆಯದ ವ್ಯಕ್ತಿಯೋರ್ವನನ್ನು ಇಂಪಾಲ ಪಶ್ಚಿಮ ಜಿಲ್ಲೆಯಲ್ಲಿ  ಹೊಡೆದು ಸಾಯಿಸಲಾದ ಘಟನೆ ನಡೆದ ಮೂರು ದಿನಗಳ ತರುವಾಯ ಪೊಲೀಸರು ಓರ್ವ ಎಸ್‌ಐ ಯನ್ನು ಅಮಾನತುಗೊಳಿಸಿರುವರಲ್ಲದೆ ಇತರ ಮೂವರು ಅಧಿಕಾರಿಗಳನ್ನು ಸೇವೆಯಿಂದ ಕಿತ್ತು ಹಾಕಿದ್ದಾರೆ.

Advertisement

ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು ಅದರಲ್ಲಿ ಕಂಡು ಬರುವಂತೆ ಮಾರಣಾಂತಿಕ ಹಲ್ಲೆಗೆ ಗುರಿಯಾಗಿದ್ದ ತರುಣನು ಇನ್ನೂ ಜೀವಂತವಾಗಿ ಬಿದ್ದುಕೊಂಡಿದ್ದಾಗ ನಾಲ್ವರು ಪೊಲೀಸರು ಯಾವುದೇ ನೆರವಿಗೆ ಮುಂದಾಗದೇ ಅಲ್ಲೇ ಇದ್ದುದು ಸ್ಪಷ್ಟವಾಗಿತ್ತು ಎಂದು ಇಂಪಾಲ ಪಶ್ಚಿಮ ಎಸ್‌ಪಿ ಜೋಗೇಶ್ವರ ಹಾವೋಬಿಜಾಂ ಮಾಧ್ಯಮಕ್ಕೆ ತಿಳಿಸಿದ್ದಾರೆ. 

ತೌಬಾಲ್‌ ಜಿಲ್ಲೆಯ ನಿವಾಸಿ ಫಾರೂಕ್‌ ಖಾನ್‌ ಎಂಬಾತನನ್ನು ಪಶ್ಚಿಮ ಇಂಪಾಲದ ಥಾರೋಯಿಜಾಂ ಎಂಬ ಪ್ರದೇಶದಲ್ಲಿ ಕಳೆದ ಗುರುವಾರ ಉದ್ರಿಕ್ತ ಗುಂಪೊಂದು ವಾಹನ ಚೋರನೆಂಬ ಶಂಕೆಯಲ್ಲಿ ನಿರ್ದಯವಾಗಿ ಹೊಡೆದು ಸಾಯಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next