Advertisement

ಜನರಿಗೆ ಸಮಸ್ಯೆಯಾಗದಂತೆ ಕ್ರಮ: ಎಸ್ಪಿ, ಸಿಇಒ

10:19 PM Mar 26, 2020 | Sriram |

ಪುತ್ತೂರು: ಕೋವಿಡ್‌ 19 ವೈರಸ್‌ ಸೋಂಕು ಹರಡದಂತೆ ನೀಡ ಲಾಗಿರುವ ಲಾಕ್‌ಡೌನ್‌ ಕರೆಯ ನಿಯಮ ಗಳನ್ನು ಜನರು ಪಾಲನೆ ಮಾಡಬೇಕು. ಜನರಿಗೆ ದಿನವಾಹಿ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮವಹಿಸಲಾ ಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಸಮಸ್ಯೆಗಳು ಉಂಟಾದಲ್ಲಿ ಮಾಹಿತಿ ನೀಡುವಂತೆ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್‌ ಮತ್ತು ದ.ಕ. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್‌. ವಿನಂತಿಸಿದ್ದಾರೆ.

Advertisement

ಪುತ್ತೂರಿನಲ್ಲಿ ವರ್ತಕರೊಂದಿಗೆ ಮಾ. 25ರಂದು ರಾತ್ರಿ ನಿರೀಕ್ಷಣಾ ಮಂದಿರದಲ್ಲಿ ಮಾತುಕತೆ ನಡೆಸಿದ ಅವರು ಸಮಸ್ಯೆ ಬಾರದಂತೆ ತಮ್ಮ ಕಡೆಯಿಂದಾಗುವ ಸಹಕಾರ ನೀಡುವ ಭರವಸೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತ ನಾಡಿ, ಇಷ್ಟರವರೆಗೆ ದಿನಸಿ ಸಾಮಗ್ರಿ, ತರಕಾರಿ, ಹಣ್ಣು, ಮೆಡಿಸಿನ್‌, ನೀರಿನ ಸೌಲಭ್ಯಗಳು ಸರಿಯಾಗಿ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ವರ್ತಕರೊಂದಿಗೆ ಮಾಹಿತಿ ಪಡೆದುಕೊಂಡಿದ್ದು, ಕೆಲವೊಂದು ಸಮಸ್ಯೆ ಇರುವುದನ್ನು ಬಗೆಹರಿಸ ಲಾಗುವುದು. ಯಾವುದೇ ಕಾರಣಕ್ಕೂ ಅಗತ್ಯ ವಸ್ತುಗಳ ಸರಬರಾಜು ನಿಲ್ಲುವುದಿಲ್ಲ. ಜನರು ಯಾವುದೇ ಭಯ ಪಡುವ ಅಗತ್ಯವಿಲ್ಲ. 21 ದಿನ ಎಲ್ಲ ಸೌಲಭ್ಯಗಳ ಸರಬರಾಜು ಇದೆ. ಜನರು ಮನೆಯಲ್ಲೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಎಸ್ಪಿ ಲಕ್ಷ್ಮೀಪ್ರಸಾದ್‌ ಹೇಳಿದರು.

ಮನೆಯಿಂದ ಆಚೆ ಬಂದಾಗ ಒಬ್ಬರು ಅಥವಾ ಇಬ್ಬರು ಮಾತ್ರ ಬನ್ನಿ. ದಿನಸಿ, ತರಕಾರಿ, ಮೆಡಿಸಿನ್‌ ತೆಗೆದುಕೊಳ್ಳಲು ಮನೆಯವರೆಲ್ಲಾ ಬರಬೇಡಿ. ಬಂದ ಮೇಲೆ ಎಷ್ಟು ಕೆಲಸ ಇದೆ ಅಷ್ಟನ್ನೆ ಮಾಡಿ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಬೇಗ ಮನೆಗೆ ತೆರಳಿ. ಇಲ್ಲಿ ಎಲ್ಲರ ಜವಾಬ್ದಾರಿ ಇದೆ. ತೊಂದರೆ ಇದ್ದರೆ ಜಿಲ್ಲಾಧಿಕಾರಿಗಳ ಕಂಟ್ರೋಲ್‌ ರೂಮ್‌ 1077 ಅಥವಾ ಪೊಲೀಸ್‌ ಕಂಟ್ರೋಲ್‌ ರೂಮ್‌ 100 ಮತ್ತು 112ಕ್ಕೆ ಕರೆ ಮಾಡಿ ಎಂದು ಬಿ.ಎಂ. ಲಕ್ಷ್ಮೀಪ್ರಸಾದ್‌ ತಿಳಿಸಿದರು.

ಪಾಸ್‌ ಸೌಲಭ್ಯ
ಪೆಟ್ರೋಲ್‌ ಪಂಪ್‌, ದಿನಸಿ ಅಥವಾ ಮೆಡಿಕಲ್‌ನಲ್ಲಿ ವರ್ತಕರಿಗೆ, ಕೆಲಸ ಮಾಡುವ ಸಿಬಂದಿ ಅಥವಾ ಇದಕ್ಕೆ ಸಂಬಂಧಿಸಿದ ಉತ್ಪನ್ನಗಳಿಗೆ ಕೆಲಸ ಮಾಡುವ ಉದ್ದೇಶದಿಂದ ಬರುವಾಗ ಅಡಚಣೆ ಆಗುತ್ತದೆ ಎಂದಿದ್ದರೆ ತಹಶೀಲ್ದಾರ್‌, ಇನ್‌ಸ್ಪೆಕ್ಟರ್‌, ಕಾರ್ಯನಿರ್ವಹಣಾಧಿಕಾರಿಯವರ ಟಾಸ್ಕ್ಪೋರ್ಸ್‌ ಸಮಿತಿ ಇದೆ. ಆ ಸಮಿತಿಯ ಮೂಲಕ ಐಡಿ ತೋರಿಸಿ ಪಾಸ್‌ ಪಡೆದುಕೊಳ್ಳಬಹುದು. ಈ ಪಾಸ್‌ನ್ನು ಬೇರೆ ಉದ್ದೇಶಕ್ಕೆ ಉಪಯೋಗಿಸಬೇಡಿ ಎಂದು ಹೇಳಿದರು.

Advertisement

ತಹಶೀಲ್ದಾರ್‌ ರಮೇಶ್‌ ಬಾಬು, ಡಿವೈಎಸ್ಪಿ ದಿನಕರ್‌ ಶೆಟ್ಟಿ, ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ತಿಮ್ಮಪ್ಪ ನಾಯ್ಕ, ಮಹಿಳಾ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಕುಸುಮಾಧರ್‌, ನಗರ ಪೊಲೀಸ್‌ ಠಾಣೆ ಎಸ್‌ಐ ಜಂಬುರಾಜ್‌ ಮಹಾಜನ್‌ ಉಪಸ್ಥಿತರಿದ್ದರು.

ನೀರು, ವಿದ್ಯುತ್‌ ಸೌಲಭ್ಯ
ಎಲ್ಲ ಕಡೆಗಳಲ್ಲೂ ಕುಡಿಯುವ ನೀರು, ವಿದ್ಯುತ್‌ ಸೌಲಭ್ಯ ಪೂರ್ಣ ರೀತಿಯಲ್ಲಿ ನಡೆಯಲಿದೆ. ಎಲ್ಲಿಯೂ ಅಡಚಣೆ ಆಗದಂತೆ ಕಾರ್ಯನಿರ್ವಹಿಸಲಾಗಿದೆ. ಪಡಿತರ ಸೌಲಭ್ಯದಲ್ಲೂ ತೊಂದರೆ ಆಗುವುದಿಲ್ಲ. ದಿನವಹಿ ಸಾಮಗ್ರಿಗಳ ಕುರಿತು ವರ್ತಕರ ಜತೆ ಮಾತು ಕತೆ ನಡೆಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್‌. ತಿಳಿಸಿದರು.

ಮಾಹಿತಿ ಮರೆಮಾಚುವ ಪ್ರಯತ್ನ
ಗಡಿಭಾಗಕ್ಕೆ ಹೊಂದಿಕೊಂಡಿರುವ ಪುತ್ತೂರು ತಾಲೂಕು ವ್ಯಾಪ್ತಿಗೆ ಕೋವಿಡ್‌ 19 ಸಂಬಂಧಿತ ಭೀತಿ ಹೆಚ್ಚಾಗಿದ್ದು, ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಎಸ್ಪಿ, ದ.ಕ.ಜಿ.ಪಂ. ಸಿಇಒ ಅವರು ಪ್ರಥಮ ಬಾರಿಗೆ ಭೇಟಿ ನೀಡಿದರೂ ಮಾಧ್ಯಮಗಳಿಗೆ ಮಾಹಿತಿಯನ್ನು ಮರೆಮಾಚಲಾಗಿತ್ತು. ಕೋವಿಡ್‌ 19 ನಿರ್ಮೂಲನೆಯ ದೃಷ್ಟಿಯಿಂದ ಪೊಲೀಸ್‌, ಆರೋಗ್ಯ ಇಲಾಖೆ ಸಿಬಂದಿಯಂತೆ ಮಾಧ್ಯಮ ಸಿಬಂದಿಯೂ ನಿರಂತರ ಶ್ರಮಿಸುತ್ತಿದ್ದರೂ ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿಗಳು ಅಗತ್ಯ ಸಂದರ್ಭದಲ್ಲಿ ಮಾಹಿತಿ ಮರೆಮಾಚುತ್ತಿರುವ ಕುರಿತು ಮಾಧ್ಯಮ ಮಿತ್ರರು, ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next