Advertisement

ಕೃತಕ ನೆರೆ ತಡೆಗೆ ಕ್ರಮ ಕೈಗೊಳ್ಳಬೇಕಿದೆ

09:46 PM Apr 20, 2019 | Sriram |

ವರ್ಷಂಪ್ರತಿ ಮಳೆಗಾಲದಲ್ಲಿ ಜ್ಯೋತಿ ಸರ್ಕಲ್‌,ಬಂಟ್ಸ್‌ ಸರ್ಕಲ್‌,ಕಂಕನಾಡಿ,ಬಲ್ಮಠ,ಕೆ.ಎಸ್‌.ರಾವ್‌ ರಸ್ತೆ, ಕೊಡಿಯಾಲಬೈಲ್‌,ಬಿಜೈ ಹಾಗೂ ಇನ್ನಿತರ ರಸ್ತೆಗಳು, ದೊಡ್ಡ ತೋಡು,ನದಿಗಳಲ್ಲಿ ನೀರು ರಭಸದಲ್ಲಿ ಹರಿದಾಗ ವಾಹಗಳಿಗೆ,ಪಾದಚಾರಿಗಳಿಗೆ ತೀರಾ ಸಂಕಷ್ಟವನ್ನೊಡ್ಡುತ್ತವೆ.

Advertisement

ಆದರೆ ಇಷ್ಟು ವರ್ಷ ಜನರು ಮಳೆಗಾಲದಲ್ಲಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ,
ಮ.ನಾ.ಪ.ವಾಗಲಿ, ಜಿಲ್ಲಾಡಳಿತವಾಗಲಿ ಮುಂಚಿತವಾಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಂಡಿಲ್ಲ. ಈ ಕೃತಕ ನೆರೆಗೆ ಮುಖ್ಯ ಕಾರಣ ತೋಡು, ಚರಂಡಿ, ರಾಜ ಕಾಲುವೆಗಳ ಹೂಳೆತ್ತುವ ಕೆಲಸ ಕ್ಲಪ್ತ ಸಮಯದೊಳಗೆ ಮಾಡಿ ಮುಗಿಸದೇ ಇರುವುದು.ಈಗಾಗಲೇ ಕೆಲವು ಕಡೆಗಳಲ್ಲಿ ಹೂಳೆತ್ತುವ ಕಾಮಗಾರಿ ಆರಂಭವಾಗಿದ್ದರೂ ಶೀಘ್ರದಲ್ಲೇ ಎಲ್ಲ ಚರಂಡಿ,ರಾಜಕಾಲುವೆಗಳನ್ನು ಸ್ವತ್ಛಗೊಳಿಸಬೇಕಿದೆ.ಬಹುತೇಕ ಎಲ್ಲ ಮುಖ್ಯರಸ್ತೆ, ಅಡ್ಡ ರಸ್ತೆಗಳ ಚರಂಡಿ ನಿರ್ಮಾಣ ಕಾಮಗಾರಿ ತುಂಬಾ ಭರದಿಂದ ನಡೆಯುತ್ತಿದೆ.

ಆದರೆ ಈ ಕಾಮಗಾರಿಗಳು ಮೇ ತಿಂಗಳೊಳಗೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.ಇದರಿಂದಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು,ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಕಾಮಗಾರಿಗಳನ್ನು ಮುಗಿಸಲು ಕ್ರಮಕೈಗೊಳ್ಳಬೇಕಿದೆ.

– ಜೆ. ಎಫ್ ಡಿ’ಸೋಜಾ,ಅತ್ತಾವರ

Advertisement

Udayavani is now on Telegram. Click here to join our channel and stay updated with the latest news.

Next