Advertisement

ವಾಹನ ಸಂಚಾರ ತಡೆಗೆ ಕ್ರಮ

05:36 PM Apr 15, 2020 | Suhan S |

ಎಚ್‌.ಡಿ.ಕೋಟೆ : ತಾಲೂಕಿನ ಕೇರಳ ಗಡಿಭಾಗದ ಬಾವಲಿ ಚೆಕ್‌ಪೋಸ್ಟ್‌ನಿಂದ ಅಧಿಕ ಪ್ರಮಾಣದ ಕೇರಳ ವಾಹನಗಳು ಸಂಚರಿಸುತ್ತಿವೆ. ಇವುಗಳ ತಡೆಗೆ ಪೊಲೀಸ್‌ ಇಲಾಖೆ ಮತ್ತು ಅಧಿಕಾರಿಗಳ ಜತೆ ಚರ್ಚಿಸಿ, ಸರ್ಕಾರದೊಡನೆ ಸಮಾ ಲೋಚನಾ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್‌. ಟಿ.ಸೋಮಶೇಖರ್‌ ತಿಳಿಸಿದರು.

Advertisement

ತಾಲೂಕಿನ ಗಡಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬಾವಲಿ ಚೆಕ್‌ಪೋಸ್ಟ್‌ ಮಾರ್ಗವಾಗಿ ಅನಗತ್ಯವಾಗಿ ತಾಲೂಕಿನಗೆ ಆಗಮಿಸುತ್ತಿದ್ದ ಕೇರಳ ವಾಹನಗಳ ಸಮಗ್ರ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿ, ಮೈಸೂರು ಜಿಲ್ಲೆ ಕೋವಿಡ್ 19 ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ನಿಯಂತ್ರಣಕ್ಕೆ ಸೋಂಕಿತ ಜಿಲ್ಲೆಗಳಿಂದ ಆಗಮಿಸುವ ನಿರ್ಗಮಿಸುವ ಜನರ ಕಡೆ ನಿಗಾವಹಿಸಬೇಕಿದೆ ಎಂದರು.

ಈ ವೇಳೆ ಶಾಸಕ ಅನಿಲ್‌ ಚಿಕ್ಕಮಾದು, ಮೈಸೂರು ಡೀಸಿ ಅಭಿರಾಮ್‌ ಜಿ ಶಂಕರ್‌, ಪೊಲೀಸ್‌ ವರಿಷ್ಠಾಧಿಕಾರಿ ರಿಶ್ವಂತ್‌, ಹುಣಸೂರು ಉಪವಿಭಾಗಾಧಿಕಾರಿ ವೀಣಾ, ಜಿಪಂ ಸದಸ್ಯೆ ಪರಿಮಳ ಶ್ಯಾಂ ಸುಂದರ್‌, ತಾಪಂ ಅಧ್ಯಕ್ಷೆ ಮಂಜುಳ, ತಹಶೀಲ್ದಾರ್‌ ಆರ್‌.ಮಂಜುನಾಥ್‌, ತಾಪಂ ಇಒ ರಾಮಲಿಂಗಯ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೋಟೆ ಶಿವಣ್ಣ, ಡಿವೈಎಸ್‌ಪಿ ಸುಂದರ್‌ರಾಜ್‌, ಡಾ.ರವಿಕುಮಾರ್‌, ಪುಟ್ಟಸ್ವಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next