Advertisement

ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ, ಕಾಲಿಗೆ ಗುಂಡು ಹೊಡೆದು ಆರೋಪಿ ಸೆರೆ

07:58 AM Jul 09, 2024 | Team Udayavani |

ಶಿವಮೊಗ್ಗ: 5 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಹಿನ್ನೆಲೆ ಕಾಲಿಗೆ ಗುಂಡು ಹೊಡೆದು ಸೆರೆ (Arrested) ಹಿಡಿಯಲಾಗಿದೆ.

Advertisement

ವಿನೋಬನಗರ ಪೊಲೀಸ್ ಠಾಣೆಯಲ್ಲಿ ರಜಾಕ್ ವಿರುದ್ಧ ಕೊಲೆ ಯತ್ನ ಹಾಗೂ ಗಾಂಜಾ ಮಾರಾಟ ಸೇರಿ 5 ಪ್ರಕರಣಗಳಿದ್ದವು.

ಆರೋಪಿಯ ಸ್ಥಳ ಪತ್ತೆ ಹಚ್ಚಿ ಹೊಳೆಹೊನ್ನೂರು ಪೊಲೀಸ್ ಠಾಣೆ ಪಿಐ ಲಕ್ಷ್ಮಿಪತಿ ನೇತೃತ್ವದಲ್ಲಿ ಬಂಧಿಸಲು ತೆರಳಲಾಗಿತ್ತು.

ಈ ವೇಳೆ ಆತ ಪೊಲೀಸ್ ಕಾನ್ಸ್‌ಟೇಬಲ್ (Police Constable) ಅರ್ಜುನ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ. ಎಷ್ಟೇ ಹೇಳಿದರೂ ಸರೆಂಡರ್ ಆಗದ ಹಿನ್ನೆಲೆ ಪಿಐ ಲಕ್ಷ್ಮಿಪತಿ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿದರು.

ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾತನಹಳ್ಳಿ ಫಾರೆಸ್ಟ್  ಬಳಿ ಈ ಘಟನೆ ನಡೆದಿದೆ‌.

Advertisement

ಇದನ್ನೂ ಓದಿ:Chaddi Gang: ಮಂಗಳೂರು‌ ನಗರದಲ್ಲಿ ಚಡ್ಡಿ ಗ್ಯಾಂಗ್ ನಿಂದ ಮತ್ತೊಂದು ಕಳ್ಳತನ ಕೃತ್ಯ?

Advertisement

Udayavani is now on Telegram. Click here to join our channel and stay updated with the latest news.

Next