Advertisement

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅರೆಸ್ಟ್‌; ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ

09:00 AM May 17, 2019 | Team Udayavani |

ಪಿರಿಯಾರಪಟ್ಟಣ: ಠಾಣೆಯಲ್ಲಿ ಮಹಿಳಾ ಪೇದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪದಲ್ಲಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್‌ ರಾಜೇ ಅರಸ್‌ ಅವರನ್ನು ಪೊಲೀಸರು ಬಂಧಿಸಿದ ಘಟನೆ ಬುಧವಾರ ಸಂಜೆ ನಡೆದಿದೆ. ಬಂಧನದ ಬಳಿಕ ರೈತ ಸಂಘದ ನೂರಾರು ಮಂದಿ ಬೆಟ್ಟದ ಪುರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

Advertisement

ಕೇಸೊಂದರ ವಿಚಾರಣೆಗೆಂದು ಅರಸ್‌ ಠಾಣೆಗೆ ತೆರಳಿದ್ದರು . ಈ ವೇಳೆ ಮಹಿಳಾ ಸಿಬಂದಿ ಮತ್ತು ಅರಸ್‌ ಮಾತಿನ ಚಕಮಕಿ ನಡೆಸಿದ್ದಾರೆ. ನನ್ನೊಂದಿಗೆ ಅರಸ್‌ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳಾ ಪೊಲೀಸ್‌ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತಕ್ಷಣ ಪೊಲೀಸರು ಅರಸ್‌ರನ್ನು ಬಂಧಿಸಿದ್ದಾರೆ.

ಅರಸ್‌ರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘಟದ ಮುಖಂಡರು ಮತ್ತು ಕಾರ್ಯಕರ್ತರು ಠಾಣೆಯ ಎದುರು ಆಹೋರಾತ್ರಿ ಧರಣಿ ನಡೆಸಿದರು. ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಸ್ನೇಹಾ ಸಹಿತ ಅಧಿಕಾರಿಗಳು ದೌಡಾಯಿಸಿ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next