Advertisement

ಹೊಸಪೇಟೆ: ಜೈಲು‌‌ ಸೇರುವ‌ ಆರೋಪಿ ಪರಾರಿ

06:39 PM Jul 28, 2021 | Team Udayavani |

ಹೊಸಪೇಟೆ: ಜೈಲಿಗೆ ಬಿಡಲು ಪೊಲೀಸರು ಕರೆತಂದಿದ್ದ ಆರೋಪಿಯೊಬ್ಬ ಜೈಲು ಪ್ರವೇಶ ದ್ವಾರದ ಮುಂದೆ ತಪ್ಪಿಸಿಕೊಂಡು‌ ಪರಾರಿಯಾದ ಘಟನೆ ನಗರದ ಉಪ ಕಾರಾಗೃಹದ ಬಳಿ ಬುಧವಾರ ನಡೆದಿದೆ.

Advertisement

ರುದ್ರೇಶ್( 27)ಪೊಲೀಸ್ ರಿಂದ ತಪ್ಪಿಸಿಕೊಂಡು ಓಡಿಹೋದ ಆರೋಪಿ.

ಗಲಾಟೆಯಲ್ಲಿ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ತಾಲ್ಲೂಕಿನ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌

ಇದನ್ನೂ ಓದಿ: ಕೃಷ್ಣಾ ನದಿ ಪ್ರವಾಹ : ರಬಕವಿ-ಬನಹಟ್ಟಿ ತಾಲೂಕಿನಲ್ಲಿ 1207 ಕುಟುಂಬಗಳ ಸ್ಥಳಾಂತರ

ಪೊಲೀಸರು, ನ್ಯಾಯಾಧೀಶರ ‌ಮುಂದೆ ಹಾಜರುಪಡಿಸಿ‌‌ ನಂತರ‌ ಜೈಲಿಗೆ‌ ಬಿಡುವ‌ ಸಂದರ್ಭದಲ್ಲಿ ಜೈಲಿನ ಗೇಟ್‌‌ ಮುಂದೆ ‌ಆರೋಪಿ ಪರಾರಿಯಾಗಿದ್ದಾನೆ.

Advertisement

ಆರೋಪಿಯ ಪತ್ತೆಗಾಗಿ  ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಹಂಪಿ ಡಿವೈಎಸ್ಪಿ ಎಸ್.ಎಸ್. ಕಾಶಿ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next