Advertisement

ಕಳ್ಳಭಟ್ಟಿ ಅಡ್ಡೆ; ಪೊಲೀಸ್‌ ಬೆನ್ನಟ್ಟಿದ್ದಾಗ ಆರೋಪಿ ಸಾವು 

09:11 AM Dec 02, 2017 | Team Udayavani |



Advertisement

ಬೆಳಗಾವಿ: ಜಿಲ್ಲೆಯ ಕಾಕತಿ  ಪೊಲೀಸ್‌ ಠಾಣೆಯ ವ್ಯಾಪ್ತಿಯ ಹೊನಗಾ ಗ್ರಾಮದಲ್ಲಿ ಕಳ್ಳ ಭಟ್ಟಿ ಸರಾಯಿ  ಸಾಗಿಸುತ್ತಿದ್ದ ಶಂಕಿತನನ್ನು ಅಬಕಾರಿ ಪೊಲೀಸರು ಬೆನ್ನಟ್ಟಿದಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ  ಆತ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದ್ದು, ಘಟನೆಯ ಬಳಿಕ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. 

24 ವರ್ಷದ ಅಡಿವೆಪ್ಪ ಎಂಬಾತ ಮೃತಪಟ್ಟಿದ್ದು, ಘಟನೆಯ ಬಳಿಕ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.  ಅಡಿವೆಪ್ಪ ಸಂಬಂಧಿಕರು ಮತ್ತು ಗ್ರಾಮಸ್ಥರು ಅಬಕಾರಿ ಕಚೇರಿಯ ಮೇಲೆ ದಾಳಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಕೊಲ್ಲಾಪುರ ವೃತ್ತದಲ್ಲಿ  ಅಬಕಾರಿ ಕಚೇರಿಯ ಗಾರ್ಡ್‌ ಏಕನಾಥ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರೆ ಹೊಡೆದು ಬಾವಿಗೆ ತಳ್ಳಿದ್ದಾರೆ ಎಂದು ಉದ್ರಿಕ್ತರು ಆರೋಪಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದೆ.

Advertisement

ಆರೋಪಿ  ಬಾವಿಗೆ ಬಿದ್ದು ಪ್ರಾಣ ಭಿಕ್ಷೆ ನೀಡಿದರೂ ಅಬಕಾರಿ ಸಿಬಂದಿಗಳು ರಕ್ಷಿಸುವ ಯಾವ ಯತ್ವನ್ನೂ ಮಾಡಲಿಲ್ಲ ಎಂದು ಆರೋಪಿಸಲಾಗಿದೆ. 

ದಾಳಿ ವೇಳೆ ನೊಂದಿಗೆ ಕಳ್ಳ ಭಟ್ಟಿ ಸಾಗಿಸುತ್ತಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ. 

ಕಾಕತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next