Advertisement

ಅಡಿಕೆ, ತಾಮ್ರದ ಹಂಡೆ  ಕಳವು  ಆರೋಪಿಗಳ ಸೆರೆ

04:49 AM Feb 18, 2019 | |

ಸಿದ್ದಾಪುರ: ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ದಿನಕರ ಶೆಟ್ಟಿ ಅವರ ಮನೆಯ ಅಂಗಳದಿಂದ ಸುಮಾರು 3 ಕ್ವಿಂಟಾಲ್‌ ಅಡಿಕೆ ಹಾಗೂ ತಾಮ್ರದ ಹಂಡೆ ಕಳವು ಮಾಡಿದ ಆರೋಪಿಗಳನ್ನು ಶಂಕರ ನಾರಾಯಣ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Advertisement

ಬೆಳ್ವೆ ಗ್ರಾಮದ ಯಳಂತ್ತೂರು ರವಿ ಯಾನೆ ರವಿಚಂದ್ರ (24) ಹಾಗೂ ಕಾರ್ಕಳ ತಾಲೂಕು ವರಂಗ ಗ್ರಾಮದ ಮಾಂತಿಬೆಟ್ಟು  ಪೃಥ್ವೀರಾಜ್‌ ಪೂಜಾರಿ (24) ಬಂಧಿತರು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಫೆ.11ರಂದು  ಕಳವು ನಡೆದಿತ್ತು. ಆರೋಪಿಗಳು ಆಮ್ನಿ ಕಾರಿನಲ್ಲಿ ಅಡಿಕೆಯನ್ನು ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದಾಗ ಆಲಾºಡಿ ಮೂರುಕೈ ಬಳಿ ಬಂಧಿಸಲಾಗದೆ. ಬಂಧಿತರಿಂದ 36 ಸಾ. ರೂ.ಮೌಲ್ಯದ ಅಡಿಕೆ, 4 ಸಾ. ರೂ. ಮೌಲ್ಯದ ತಾಮ್ರದ ಹಂಡೆ ಹಾಗೂ  2.5 ಲ. ರೂ. ಮೌಲ್ಯದ  ಕಾರನ್ನು ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next