Advertisement

ತಾಯಿ, ಅಣ್ಣನ ಮೇಲೆ ಹಲ್ಲೆ ಮಾಡಿದ ಆರೋಪಿ ಬಂಧನ

08:58 PM Nov 09, 2022 | Team Udayavani |

ವಿಟ್ಲ : ಅಳಿಕೆ ಗ್ರಾಮದ ನೆಗಳಗುಳಿಯಲ್ಲಿ ತಾಯಿ ಹಾಗೂ ಅಣ್ಣನ ಮೇಲೆ ಕತ್ತಿಯಲ್ಲಿ ಕಡಿದು ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ.

Advertisement

ಆರೋಪಿ ಹರೀಶ್‌(25) ಬಂಧಿತ ಆರೋಪಿ. ಅಳಿಕೆ ಗ್ರಾಮ ನೆಗಳಗುಳಿ ನಿವಾಸಿ ವಾರಿಜಾ ಮತ್ತು ಕೃಷ್ಣ ಕುಮಾರ್‌ ಗಂಭೀರ ಗಾಯಗೊಂಡವರು. ಇವರು ವಾಸವಿರುವ ಮನೆಯನ್ನು ಬಿಟ್ಟು ಕೊಡಬೇಕೆಂದು ವಾರಿಜಾ ಮತ್ತು ಅವರ ಹಿರಿಯ ಪುತ್ರ ಕೃಷ್ಣ ಕುಮಾರ್‌ ಅವರ ಮೇಲೆ ಹರೀಶ್‌ ದಾಳಿ ಮಾಡಿ, ಕತ್ತಿಯಲ್ಲಿ ಕಡಿದಿದ್ದಾನೆ.

ಆತ ಹಲ್ಲೆಯಿಂದ ಗಾಯಗೊಂಡ ಗಾಯಾಳುಗಳನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next