Advertisement

ಟಿವಿ ನೋಡಲು ಬಂದ ಪಕ್ಕದ ಮನೆಯ ಯುವತಿ ಮೇಲೆ ಬಲಾತ್ಕಾರ: ಆರೋಪಿ ಬಂಧನ

06:34 PM Aug 10, 2022 | Team Udayavani |

ತೀರ್ಥಹಳ್ಳಿ : ಟಿ.ವಿ.ನೋಡಲು ಬರುತ್ತಿದ್ದ ಪಕ್ಕದ ಮನೆಯ ಯುವತಿಯನ್ನು ರೇಪ್ ಮಾಡಿ ಗರ್ಭಾವತಿಯನ್ನಾಗಿ ಮಾಡಿದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ತಾಲೂಕಿನ ನಾಲೂರಿನಲ್ಲಿ ಯುವತಿಯೊಬ್ಬಳು 2021 ರ ಡಿಸೆಂಬರ್ ನಲ್ಲಿ ಕಾಲೇಜು ಇಲ್ಲದ ಕಾರಣ ಪಕ್ಕದ ಮನೆಯ ಮುರುಳೀಧರ್ ಭಟ್ ಎಂಬುವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದಳು. ಟಿವಿ ನೋಡುವ ವೇಳೆ ಯುವತಿಯನ್ನು ಮುರುಳೀಧರ್ ಬಲತ್ಕರಿಸಿರುವುದಾಗಿ ಯುವತಿ ಆರೋಪಿಸಿದ್ದಾಳೆ.

ಇದಾದ ನಂತರ ದಾರಿಯಲ್ಲಿ ಸಿಕ್ಕಾಗಲೆಲ್ಲಾ ಮನೆಗೆ ಬಾ ಎಂದು ಕರೆದಿದ್ದು, ಎರಡು ಮೂರು ಬಾರಿ ಆತನ ಆಹ್ವಾನವನ್ನು ತಿರಸ್ಕರಿಸಿದ ಯುವತಿಗೆ ಮುರಳೀಧರ್ ಮನೆಗೆ ಬಾರದಿದ್ದರೆ ನಿನ್ನನ್ನೂ ಮತ್ತು ನಿನ್ನ ತಾಯಿಯನ್ನು ಜೀವಂತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದನು.

ಈ ಬೆದರಿಕೆಯ ಬೆನ್ನಲ್ಲೇ ಮನೆಗೆ ಬಂದ ಯುವತಿಯನ್ನು ಮತ್ತೆ ಬಲತ್ಕರಿಸಿರುವುದಾಗಿ ಆರೋಪಿಸಲಾಗಿದೆ. ಇದಾದ ನಂತರ ದೇಹದಲ್ಲಿ ಬದಲಾವಣೆಯಾಗಿದ್ದು ,ತಾಯಿ ಇದನ್ನು ಗಮನಿಸಿ ತೀರ್ಥಹಳ್ಳಿಯಲ್ಲಿ ಆಸ್ಪತ್ರೆಗೆ ತೋರಿಸಿದಾಗ ಯುವತಿ 7 ತಿಂಗಳ ಗರ್ಭಾವತಿ ಎಂದು ತಿಳಿದು ಬಂದಿದೆ.

ಈಗ ಯುವತಿಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಲಾಗಿದ್ದು ಬಲಾತ್ಕಾರ ಪ್ರಕರಣದಲ್ಲಿ ದೂರು ದಾಖಲಾಗಿದೆ. ಆರೋಪಿ  ಮುರುಳೀಧರ್ ಭಟ್ ನ್ನು ಆಗುಂಬೆ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next