Advertisement

ಕೇರಳದಲ್ಲಿ ಮಾಟ-ಮಂತ್ರದ ಕಾರಣಕ್ಕೆ ಮಗಳ ಕೊಲೆ ಮಾಡಿದ ಆರೋಪಿ ಕಾರವಾರದಲ್ಲಿ ಬಂಧನ

08:54 PM Apr 20, 2021 | Team Udayavani |

ಕಾರವಾರ: ಕೇರಳದ ಕೊಚ್ಚಿ ನಗರದ ವ್ಯಾಪ್ತಿಯಲ್ಲಿ ಮಾಟ-ಮಂತ್ರದ ಕಾರಣಕ್ಕೆ 13 ವರ್ಷದ ಮಗಳನ್ನೇ ಬಲಿಕೊಟ್ಟು, ನಂತರ ತಲೆ ಮರೆಸಿಕೊಂಡಿದ್ದ ಆರೋಪಿ ಕಾರವಾರದ ಬೀಚ್‌ನಲ್ಲಿ ಅಲೆಯುತ್ತಿದ್ದಾಗ ಕಾರವಾರದ ಬೀಟ್‌ ಹಾಗೂ ಟ್ರಾಫಿಕ್‌ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

Advertisement

ಕೇರಳ ಪೊಲೀಸರಿಗೆ ಬೇಕಾಗಿದ್ದ ಈ ಆರೋಪಿಯನ್ನು ಕರ್ನಾಟಕ ಪೊಲೀಸರ ನೆರವಿನಿಂದ ಕಾರವಾರದಲ್ಲಿ ಬಂಧಿಸಲಾಗಿದೆ. ಕೇರಳದ ಸಾನು ಮೋಹನ್‌ ಬಂಧಿತ ಆರೋಪಿ. ನಲ್ವತ್ತು ವರ್ಷದ ಈತ ಮಾಟ-ಮಂತ್ರದ ಉದ್ದೇಶಕ್ಕಾಗಿ ತನ್ನ ಮಗಳನ್ನೇ ಬಲಿ ನೀಡಿದ್ದ. ಈ ಕೊಲೆ ಮಾ. 20ರಂದು ನಡೆದಿತ್ತು. ಈ ಸಂಬಂಧ ತ್ರಿಕ್ಕಾಕರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಆರೋಪಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಕೇರಳ ಪೊಲೀಸರು ಲುಕ್‌ಔಟ್‌ ನೋಟಿಸ್‌ ನೀಡಿದ್ದರು.

ಆರೋಪಿಯ ಮೊಬೈಲ್‌ ಫೋನ್‌ ಕರ್ನಾಟಕದ ಕಾರವಾರದಲ್ಲಿರುವುದು ಗೊತ್ತಾಗಿತ್ತು. ಈ ಜಾಡನ್ನು ಹಿಡಿದ ಕೇರಳದ ಪೊಲೀಸರು ಕಾರವಾರಕ್ಕೆ ಧಾವಿಸಿದ್ದರು. ಇಲ್ಲಿನ ಪೊಲೀಸರ ನೆರವು ಕೋರಿದ್ದರು. ಬಳಿಕ ಕರ್ನಾಟಕ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ್ದು, ಈತನನ್ನು ಕೇರಳ ಪೊಲೀಸರಿಗೆ ಸೋಮವಾರ ಬೆಳಗ್ಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next