Advertisement

Kundapura ಮೇಣದ ಬತ್ತಿ ಬಿದ್ದು ಬೆಂಕಿ ಆಕಸ್ಮಿಕ: ಸಾವು

12:45 AM Oct 23, 2023 | Team Udayavani |

ಕುಂದಾಪುರ: ಊಟ ಮಾಡುವಾಗ ವಿದ್ಯುತ್‌ ಕೈ ಕೊಟ್ಟಾಗ ಮೇಣದ ಬತ್ತಿ ಬಿದ್ದು ಬಟ್ಟೆಗೆ ಬೆಂಕಿ ಹಿಡಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

Advertisement

ಅ.8ರಂದು ರಾತ್ರಿ ಮೊಂತಿ ಪಿರೇರಾ (76) ಅವರು ಊಟ ಮಾಡುತ್ತಿದ್ದಾಗ ವಿದ್ಯುತ್‌ ಕೈ ಕೊಟ್ಟ ಕಾರಣ ಉಪಯೋಗಿಸಿದ ಮೇಣದ ಬತ್ತಿಯು ಆಕಸ್ಮಿಕವಾಗಿ ಮೈಮೇಲೆ ಬಿತ್ತು. ಅವರು ಧರಿಸಿದ ನೈಟಿಗೆ ಬೆಂಕಿ ತಗಲಿ ಸುಟ್ಟ ಗಾಯವಾಗಿತ್ತು.

ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅಜ್ಜರಕಾಡು ಆಸ್ಪತ್ರೆ ಮತ್ತೆ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅ. 22ರಂದು ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next