Advertisement

ಅಪಘಾತ: ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೇ ಬೈಕ್ ಸವಾರ ಸಾವು; ಆಸ್ಪತ್ರೆಯಲ್ಲಿ ಧರಣಿ

02:15 PM Oct 28, 2019 | keerthan |

ಚಿಕ್ಕಬಳ್ಳಾಪುರ: ‌ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಜಿಲ್ಲಾಸ್ಪತ್ರೆಯಲ್ಲಿ ಸಕಾಲದ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವ ಸೋಮವಾರ ನಡೆದಿದೆ.

Advertisement

ಮೃತ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ನಗರದ ಶಾಂತಿನಗರದ ನಿವಾಸಿ ಜಭೀವುಲ್ಲಾ (26) ಎಂದು ಗುರುತಿಸಲಾಗಿದೆ.

ನಗರದ ಹೊರ ವಲಯದ ಕಂದವಾರ ಕೆರೆ ಸಮೀಪ ಇರುವ ನಗರಸಭೆಯ ಪಂಪ್ ಹೌಸ್ ಬಳಿ ಅಪಘಾತ ನಡೆದಿದ್ದು, ತಕ್ಷಣ ಕಾರು ಮಾಲೀಕ ಗಾಯಾಳು ಜಭೀವುಲ್ಲಾರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದರೂ ಸುಮಾರು ಒಂದು ಗಂಟೆ ಕಾಲ ಚಿಕಿತ್ಸೆ ದೊರೆಯದ ತಡವಾದ ಕಾರಣ ಗಾಯಳು ಜಭೀವುಲ್ಲಾ ಅಸುನೀಗಿದ್ದಾನೆ.

ಕಂದವಾರದಲ್ಲಿರುವ ತಮ್ಮ ಅತ್ತೆ ಮನೆಗೆ ಹೋಗಿ ಹೆರಿಗೆಯಾಗಿದ್ದ ಪತ್ನಿ ಹಾಗೂ ಮಗುವಿನ ಯೋಗಕ್ಷೇಮ ವಿಚಾರಿಸಿಕೊಂಡು ಚಿಕ್ಕಬಳ್ಳಾಪುರ ನಗರಕ್ಕರ ವಾಪಸ್ಸು ಬರುವ ವೇಳೆ ಅಪಘಾತ ಸಂಭವಿಸಿದೆ.

ವೈದ್ಯರ ಈ ನಿರ್ಲಕ್ಷ್ಯ ಖಂಡಿಸಿ ಪೋಷಕರು ಜಿಲ್ಲಾಸ್ಪತ್ರೆ ಎದುರು ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next