Advertisement

ಮಂಜು ಮುಸುಕಿದ ಹಾದಿ; ಅಪಘಾತ ಅಪಾಯ

10:07 AM Aug 04, 2019 | Team Udayavani |

ಬೆಳ್ತಂಗಡಿ: ಚಿಕ್ಕಮಗಳೂರು, ಮೂಡಿಗೆರೆ, ಚಾರ್ಮಾಡಿ ಸೇರಿದಂತೆ ಸುತ್ತಮುತ್ತ ಎರಡು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಅಲ್ಲಲ್ಲಿ ಮರಗಳು ಧರೆಗುರು ಳುತ್ತಿವೆ, ಮಣ್ಣು ಕುಸಿತ ಉಂಟಾಗಿದೆ.
ಘಾಟಿಯ ಮಲೆಯಮಾರುತ ಅತಿಥಿ ಗೃಹ ಸಮೀಪ ತಿರುವಿನಲ್ಲಿ ರಸ್ತೆಗೆ ಉರುಳಿದ್ದ ಮರವನ್ನು ತೆರವುಗೊಳಿಸಲಾಗಿದೆ. ಬಣಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಆಲೆಕಾನ್‌ ಫಾಲ್ಸ್‌ ಮತ್ತು ಹೊರಟ್ಟಿಗೆ ಸಾಗುವ ರಸ್ತೆ ಅಂಚಿನಲ್ಲಿ ನಾಲ್ಕು ಬಂಡೆಕಲ್ಲುಗಳು ರಸ್ತೆಗೆ ಉರುಳಿದ್ದರಿಂದ ಶನಿವಾರ ಬೆಳಗ್ಗೆ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

Advertisement

ತಿರುವುಗಳಲ್ಲೇ ಅಪಾಯ
5ನೇ ತಿರುವು ಸಮೀಪ ಮರದ ಗೆಲ್ಲು ರಸ್ತೆ ಮಧ್ಯಕ್ಕೆ ಚಾಚಿದ್ದರೂ ಅರಣ್ಯ ಇಲಾಖೆ ತೆರವಿಗೆ ಮುಂದಾಗಿಲ್ಲ. 9ನೇ ತಿರುವಿನಲ್ಲಿ ಧರೆಗುರುಳಿದ ಸಣ್ಣ ಪುಟ್ಟ ಮರಗಳನ್ನು ತೆರವು ಮಾಡಲಾಗಿದೆ. ಮಳೆಯಿಂದಾಗಿ 6, 8ನೇ ತಿರುವಿನ ಮಧ್ಯೆ ಮರ ಉರುಳಿದ್ದರಿಂದ ಮಣ್ಣು ಕುಸಿದು ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗಿದೆ.

ಶುಕ್ರವಾರ ಮತ್ತು ಶನಿವಾರ ಮೂಡಿಗೆರೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗು ತ್ತಿದ್ದು, ಚಾರ್ಮಾಡಿ ಹಾದಿಯಲ್ಲಿ ಎದುರು ಬದಿಯ ವಾಹನ ಗೋಚರಿಸದಿರುವಷ್ಟು ಮಂಜು ಆವರಿಸುತ್ತಿದೆ. ವಾಹನ ಸವಾರರು ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಅಪಾಯ ಸಾಧ್ಯತೆ ಇದೆ.

ಬಸ್‌ ಚರಂಡಿಗೆ
ಅಣ್ಣಪ್ಪ ಬೆಟ್ಟದಿಂದ ಕೆಳಬದಿ ತಿರುವಿನಲ್ಲಿ ಶನಿವಾರ ಸಂಜೆ ಚಾಲಕನೊಬ್ಬ ಟಿಪ್ಪರನ್ನು ಅಜಾಗರೂಕತೆಯಿಂದ ಚಲಿಸಿದ್ದರಿಂದ ಧರ್ಮಸ್ಥಳದಿಂದ ದಾವಣಗೆರೆಗೆ ತೆರಳುವ ಹೊನ್ನಾಳಿ ಡಿಪೊದ ಬಸ್‌ ಚರಂಡಿಗೆ ಉರುಳಿತ್ತು. ಮಹಿಳೆಯೊಬ್ಬರ ಕಾಲಿಗೆ ಗಂಭೀರ ಗಾಯವಾಗಿದೆ.

ವಾಹನ ಸವಾರರು ಮುಂಜಾಗ್ರತೆ ವಹಿಸುವಂತೆ ಬಣಕಲ್‌ ಪೊಲೀಸರು ಮತ್ತು ಬೆಳ್ತಂಗಡಿ ಸಂಚಾರ ಠಾಣೆ ಪೊಲೀಸರು ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next