Advertisement

ಮೈಸೂರಿನಲ್ಲಿ ಜೀಪ್‌ಗೆ ಸರ್ಕಾರಿ ಬಸ್‌ ಢಿಕ್ಕಿ: ಎಸ್‌ಐ,ಪೇದೆ ಸಾವು 

05:14 PM Jan 28, 2017 | Team Udayavani |

ಮೈಸೂರು: ಇಲ್ಲಿನ ಟೀ ನರಸೀಪುರ ರಸ್ತೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ  ಇನ್ಸ್‌ಪೆಕ್ಟರ್‌ ಮತ್ತು ಪೇದೆಯೊಬ್ಬರು ದಾರುಣವಾಗಿ ಸಾವನ್ನಪ್ಪಿ, ಇಬ್ಬರು ಪೊಲೀಸ್‌ ಸಿಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

 ಪೊಲೀಸ್ ಜೀಪ್ ಗೆ ಟಿ.ನರಸೀಪುರದಿಂದ ಬರುತ್ತಿದ್ದ  ಕೆಎಸ್‌ಆರ್‌ಟಿಸಿ ಬಸ್‌  ಮೈಸೂರಿನಿಂದ ಸುತ್ತೂರು ಕಡೆ ತೆರಳುತ್ತಿದ್ದ ಜೀಪ್‌ಗೆ ಢಿಕ್ಕಿಯಾಗಿದ್ದು  ಪರಿಣಾಮವಾಗಿ ಮೈಸೂರು  ಅಪರಾಧ ತನಿಖಾ ದಳದ ಇನ್ಸ್ ಪೆಕ್ಚರ್ ಮಹೇಶ್ ಕುಮಾರ್ ಮತ್ತು ಜೀಪ್ ಡ್ರೈವಿಂಗ್‌ ಮಾಡುತ್ತಿದ್ದ ಪೇದೆ ಲಕ್ಷ್ಮಣ್ ಮೃತಪಟ್ಟಿದ್ದಾರೆ. 

ಅಪಘಾತದ ತೀವ್ರತೆಗೆ ಲಕ್ಷ್ಮಣ್  ಸ್ಥಳದಲ್ಲೇ ಮೃತಪಟ್ಟಿದ್ದು, ಮಹೇಶ್‌ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. 

ಗಾಯಾಳುಗಳಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next