Advertisement

ಹುಣಸೂರು: ಟ್ರಾಕ್ಟರ್ –ಬೈಕ್ ಢಿಕ್ಕಿ; ಸವಾರ ಸಾವು

12:37 PM Jun 26, 2022 | Team Udayavani |

ಹುಣಸೂರು: ಬೈಕ್ ಮತ್ತು ಟ್ರಾಕ್ಟರ್ ಢಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬೈಪಾಸ್ ರಸ್ತೆಯಕೆ.ಆರ್.ನಗರ ಜಂಕ್ಷನ್ ನಲ್ಲಿ ನಡೆದಿದೆ.

Advertisement

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಎಂ.ಶೆಟ್ಟಹಳ್ಳಿಯ ಕೆಂಗೇಗೌಡರ ಪುತ್ರ ರವಿ( 42) ಮೃತಪಟ್ಟವರು.

ಕೂಲಿ ಕೆಲಸ ಮಾಡುವ ರವಿ ಬೆಳಗ್ಗೆ ಹುಣಸೂರಿನ ಸ್ನೇಹಿತನನ್ನು ನೋಡಿಕೊಂಡು ಬರುತ್ತೇನೆಂದು ಮನೆಯಲ್ಲಿ ಹೇಳಿ ತನ್ನ ಬೈಕಿನಲ್ಲಿ ಬಂದಿದ್ದ, ರಾತ್ರಿ ವಾಪಸ್ ತೆರಳುತ್ತಿದ್ದ ವೇಳೆ ಹೆದ್ದಾರಿ -275 ಬೈಪಾಸ್ ನ ಕೆ.ಆರ್.ನಗರ ಜಂಕ್ಷನ್ ಬಳಿ ಟ್ರಾಕ್ಟರ್ ಢಿಕ್ಕಿ ಹೊಡೆದ ರಭಸಕ್ಕೆ ತೀವ್ರಗಾಯಗೊಂಡು ಸಾವನ್ನಪ್ಪಿದ್ದಾರೆ.

ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next