Advertisement

ಲಂಚ ಸ್ವೀಕಾರ: ಎಸಿಬಿ ಬಲೆಗೆ ಬಿದ್ದ ಎಇ

02:22 PM Apr 01, 2022 | Team Udayavani |

ಬೀದರ: ಕಾಮಗಾರಿಯ ಆದೇಶ ಪ್ರತಿ ನೀಡಲು ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ (ಆರ್‌ಡಿಡಬ್ಲ್ಯೂಎಸ್‌) ಸಹಾಯಕ ಅಭಿಯಂತರ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.

Advertisement

ನಾಗನಾಥ ಲಕ್ಷ್ಮಣರಾವ್‌ ಬಿರಾದಾರ ಎಸಿಬಿ ಬಲೆಗೆ ಬಿದ್ದಿರುವ ಸಹಾಯಕ ಅಭಿಯಂತರ. ನಗರದ ದೇವಿ ಕಾಲೋನಿ ನಿವಾಸಿಯಾಗಿರುವ ಮಚ್ಛೇಂದ್ರ ರೆಡ್ಡಿ ರಾಮರೆಡ್ಡಿ ಅವರಿಗೆ ಜಲಜೀವನ ಮಿಷನ್‌ ಯೋಜನೆಯಡಿ ಟೆಂಡರ್‌ ಹಂಚಿಕೆಯಾಗಿದ್ದು, ಟೆಂಡರ್‌ ಕರಾರು ಒಪ್ಪಂದ ಮತ್ತು ವರ್ಕ್‌ ಆರ್ಡರ್‌ ಸಿದ್ಧಪಡಿಸಿ ಕಾಮಗಾರಿಯ ಆದೇಶ ಪ್ರತಿಯನ್ನು ನೀಡಿದ ನಂತರ 30 ಸಾವಿರ ರೂ. ಲಂಚಕ್ಕಾಗಿ ಎಇ ನಾಗನಾಥ ಅವರು ಬೇಡಿಕೆ ಇಟ್ಟಿದ್ದರು. ಈ ಕುರಿತು ಮಚ್ಛೇಂದ್ರ ಅವರು ಎಸಿಬಿಗೆ ದೂರು ನೀಡಿದ್ದರು.

ಒಪ್ಪಂದದಂತೆ ಗುರುವಾರ ಎಇ ನಾಗನಾಥ ಅವರು ಗುತ್ತಿಗೆದಾರ ಮಚ್ಛೇಂದ್ರ ರೆಡ್ಡಿ ಅವರಿಂದ 30 ಸಾವಿರ ರೂ. ಲಂಚದ ಹಣ ತೆಗೆದುಕೊಳ್ಳುವಾಗ ಎಸಿಬಿ ಡಿವೈಎಸ್‌ಪಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಿ ಆಪಾದಿತನಿಗೆ ದಸ್ತಗಿರಿ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪಿಐಗಳಾದ ವೆಂಕಟೇಶ ಯಡಹಳ್ಳಿ, ಶರಣಬಸಪ್ಪ ಮತ್ತು ಸಿಬ್ಬಂದಿ ದಾಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next