Advertisement

“ಮೈತ್ರಿ ಒಪ್ಪಿಕೊಳ್ಳಿ,ಇಲ್ಲ ಹೊರ ಹೋಗಿ’

06:45 AM Aug 12, 2017 | |

ಹೊಸದಿಲ್ಲಿ:  “ಬಿಜೆಪಿಯೊಂದಿಗಿನ ಮೈತ್ರಿಯನ್ನು ಒಪ್ಪಿಕೊಳ್ಳುವುದಾದರೆ ಒಪ್ಪಿಕೊಳ್ಳಿ. ಇಲ್ಲದಿದ್ದರೆ ಹೊರ ನಡೆಯಿರಿ’!

Advertisement

ಜೆಡಿಯು ನಾಯಕ ಶರದ್‌ ಯಾದವ್‌ ಅವರಿಗೆ ಇಂತಹುದೊಂದು ಖಡಕ್‌ ಸಂದೇಶ ರವಾನಿಸಿದ್ದು ಬೇರಾರೂ ಅಲ್ಲ, ಬಿಹಾರ ಸಿಎಂ ನಿತೀಶ್‌ ಕುಮಾರ್‌.

ಬಿಹಾರದಲ್ಲಿ ಮಹಾಘಟಬಂಧನ್‌ಗೆ ಗುಡ್‌ಬೈ ಹೇಳಿದ ಸಿಎಂ ನಿತೀಶ್‌ ಕುಮಾರ್‌ ವಿರುದ್ಧ ನಿರಂತರವಾಗಿ, ಅದೂ ಸಾರ್ವಜನಿಕವಾಗಿ ಬಂಡಾಯದ ಮಾತುಗಳನ್ನು ಆಡುತ್ತಾ ಬಂದಿರುವ ಶರದ್‌ ಯಾದವ್‌ ವಿರುದ್ಧ ಇದೇ ಮೊದಲ ಬಾರಿಗೆ ನಿತೀಶ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಶುಕ್ರವಾರ ಹೊಸದಿಲ್ಲಿಗೆ ತೆರಳಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗಿ ಹೊರಬಂದ ನಂತರ ನಿತೀಶ್‌ರಿಂದ ಇಂಥ ಮಾತುಗಳು ಹೊರಬಿದ್ದಿವೆ.
 

Advertisement

Udayavani is now on Telegram. Click here to join our channel and stay updated with the latest news.

Next