Advertisement

ಕುಂದಾಪುರ: ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪ್ರಭಾರ ಕಂದಾಯ ನಿರೀಕ್ಷಕ

02:24 PM Nov 12, 2020 | keerthan |

ಕುಂದಾಪುರ: ಕುಂದಾಪುರ ಹೋಬಳಿಯ ಪ್ರಭಾರ ಕಂದಾಯ ನಿರೀಕ್ಷಕ ಭರತ್ ವಿ ಶೆಟ್ಟಿ ಅವರು ಲಂಚ ಸ್ವೀಕರಿಸುತ್ತಿದ್ದಾಗ ಗುರುವಾರ ಮಧ್ಯಾಹ್ನ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

Advertisement

ಭೂ ಪರಿವರ್ತನೆಯೊಂದರೆ ಸಲುವಾಗಿ ಜಾಗದ ಮಾಲಕನಿಂದ 12 ಸಾವಿರ ರೂ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು, ಮಾತುಜತೆ ಮೂಲಕ ಐದು ಸಾವಿರಕ್ಕೆ ಇತ್ಯರ್ಥವಾಗಿತ್ತು. ನಗದು ಸ್ವೀಕರಿಸುತ್ತಿದ್ದಾಗ ಪೂರ್ವ ಮಾಹಿತಿಯ ಅನ್ವಯ ಉಡುಪಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಅಖಂಡ ಶ್ರೀನಿವಾಸ ಮೂರ್ತಿಗೆ ಬಿಜೆಪಿಯಿಂದ ಸಂಪೂರ್ಣ ಬೆಂಬಲ: ನಳಿನ್ ಕುಮಾರ್

ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ಮಂಜುನಾಥ್ ಬಿ, ಇನ್ಸ್ಪೆಕ್ಟರ್ ಸತೀಶ್ ಬಿ  ಎಸ್ ಹಾಗೂ  ಚಂದ್ರಕಲಾ, ಸಿಬ್ಬಂದಿಗಳಾದ ಯತೀನ್ ಕುಮಾರ್, ರವೀಂದ್ರ ಗಾಣಿಗ, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ಲತೀಫ್, ರಾಘವೇಂದ್ರ ಪೂಜಾರಿ ಹೊಸಕೋಟೆ, ಸೂರಜ್ ಕಾಪು, ಹಾಗೂ  ಪ್ರತಿಮಾ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next