Advertisement

ಮೂಡಿಗೆರೆ : ನಕ್ಷೆ ತಿದ್ದುಪಡಿ ಮಾಡಲು ಲಂಚಕ್ಕೆ ಬೇಡಿಕೆ : ಸರ್ವೆ ಸೂಪರ್ ವೈಸರ್ ಎಸಿಬಿ ಬಲೆಗೆ

05:31 PM Jun 01, 2022 | Team Udayavani |

ಚಿಕ್ಕಮಗಳೂರು : ಜಮೀನಿನ ನಕ್ಷೆ ತಿದ್ದುಪಡಿ ಮಾಡಿಕೊಡಲು ನಾಲ್ಕು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ವೆ ಸೂಪರ್ ವೈಸರ್ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಸರ್ವೆ ಸೂಪರ್ ವೈಸರ್ ಆಗಿದ್ದ ಪ್ರಕಾಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

ಗೋಣಿಬೀಡು ಗ್ರಾಮದ ಮಹೇಶ್ ಎಂಬುವವರು ತಮ್ಮ ಜಮೀನಿನ ನಕ್ಷೆ ತಿದ್ದುಪಡಿ ಮಾಡುವ ಸಲುವಾಗಿ ಕಚೇರಿಗೆ ಬಂದಿದ್ದರು ಈ ವೇಳೆ ಸರ್ವೆ ಸೂಪರ್ ವೈಸರ್ ಪ್ರಕಾಶ್ ನಕ್ಷೆ ತಿದ್ದುಪಡಿ ಮಾಡಿಕೊಡಲು ನಾಲ್ಕು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ, ಈ ಕುರಿತು ಮಹೇಶ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು ಅದರಂತೆ ನಾಲ್ಕು ಲಕ್ಷದಲ್ಲಿ ಮುಂಗಡ ಒಂದು ಲಕ್ಷ ನೀಡುವುದಾಗಿ ಮಹೇಶ್ ಹೇಳಿದ್ದು ಬುಧವಾರ ಮೂಡಿಗೆರೆ ತಾಲೂಕು ಕಚೇರಿ ಬಳಿ ಪ್ರಕಾಶ್ ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಕಾರ್ಯಾಚರಣೆಯಲ್ಲಿ ಎಸಿಬಿ ಎಸ್ಪಿ ಸೈಮನ್, ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ಇದ್ದರು.

ಇದನ್ನೂ ಓದಿ : ರೈತ ಸಂಘ-ಹಸಿರು ಸೇನೆಗೆ ಎಚ್.ಆರ್. ಬಸವರಾಜಪ್ಪ ನೂತನ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next