Advertisement

ಗಂಗಾವತಿ ಸಬ್‌ ರಿಜಿಸ್ಟರ್‌ ಕಚೇರಿ ಮೇಲೆ ಎಸಿಬಿ ದಾಳಿ

05:08 PM Nov 10, 2019 | Team Udayavani |

ಗಂಗಾವತಿ: ನಗರದ ಸಬ್‌ ರಿಜಿಸ್ಟರ್‌ ಕಚೇರಿ ಮೇಲೆ ಗುರುವಾರ ಎಸಿಬಿ ತಂಡ ದಾಳಿ ನಡೆಸಿ ವ್ಯಾಪಕ ದಾಖಲೆ ಪರಿಶೀಲಿಸಿದ್ದು, ಮಧ್ಯವರ್ತಿಗಳಿಂದ ಸಾವಿರಾರು ರೂ. ವಶಕ್ಕೆ ಪಡೆದುಕೊಂಡ ಘಟನೆ ಜರುಗಿದೆ.

Advertisement

ಕೊಪ್ಪಳದ ಕನಕಪ್ಪ ನೀಡಿದ ದೂರಿನ ಅನ್ವಯ ಎಸಿಬಿ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಅವರ ನೇತೃತ್ವದ 10 ಜನ ಸಿಬ್ಬಂದಿ ಗುರುವಾರ ಮಧ್ಯಾಹ್ನ 3:30ಕ್ಕೆ ಸಬ್‌ ರಿಜಿಸ್ಟರ್‌ ಕಚೇರಿಗೆ ಆಗಮಿಸಿದೆ. ಬಾಗಿಲು ಹಾಕಿಕೊಂಡು ಸಿಬ್ಬಂದಿ ಮತ್ತು ಮಧ್ಯವರ್ತಿಗಳಿಂದ ಮಾಹಿತಿ ಸಂಗ್ರಹಿಸಿ ಮಧ್ಯವರ್ತಿಗಳಿಂದ 39,150 ರೂ. ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಕೆಲಸ ಮಾಡಲು ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ವಿಳಂಬ ಮಾಡಲಾಗುತ್ತದೆ. ಲಂಚವಿಲ್ಲದೆ ಯಾವುದೇ ಕಾರ್ಯಗಳು ಆಗುವುದಿಲ್ಲ ಎಂಬ ಸಾರ್ವಜನಿಕರಿಂದ ದೂರು ದಾಖಲಾದ ಹಿನ್ನೆಲೆಯಲ್ಲಿ ಮೇಲೆ ದಾಳಿ ಮಾಡಲಾಗಿದೆ. ಸಾಮಾಜಿಕ ಹೋರಾಟಗಾರ ಕನಕಪ್ಪ ದೂರು ನೀಡಿದ್ದಾರೆ ಎಂದು ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next