Advertisement

ವಾಲ್‌ಮಾರ್ಕ್‌ ಕಂಪನಿ ಮೇಲೆ ಮತ್ತೊಮ್ಮೆ ಎಸಿಬಿ ದಾಳಿ

06:42 AM May 09, 2019 | Lakshmi GovindaRaj |

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ವಾಲ್‌ಮಾರ್ಕ್‌ ಕಂಪನಿ ನಿರ್ದೇಶಕ ರತನ್‌ ಬಾಬುಲಾಲ್‌ ಲಾಥ್‌ ಅವರ ಸಂಸ್ಥೆ ಮತ್ತು ನಿವಾಸಗಳ ಮೇಲೆ ಬುಧವಾರ ಮತ್ತೊಮ್ಮೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

Advertisement

ಬುಧವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದ ರತನ್‌ ಬಾಬುಲಾಲ್‌ ಲಾಥ್‌ ಅವರನ್ನು ಸಂಜೆವರೆಗೂ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಅನಂತರ ರೆಸಿಡೆನ್ಸಿ ರಸ್ತೆಯಲ್ಲಿನ ವಾಲ್‌ಮಾರ್ಕ್‌ ಕಂಪನಿ ಮತ್ತು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿನ ನಿವಾಸದ ಮೇಲೆ ದಾಳಿ ನಡೆಸಿ ಮತ್ತಷ್ಟು ದಾಖಲೆಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಜತೆಗೆ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೌತಮ್‌ ನಿವಾಸದ ಮೇಲೂ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ಶೋಧ ಕಾರ್ಯ ವೇಳೆ ಸರ್ಕಾರಿ ದಾಖಲೆಗಳು ಪತ್ತೆಯಾಗಿವೆ. ಅವುಗಳು ಬಿಬಿಎಂಪಿ ಮತ್ತು ಬಿಡಿಎ ಕಚೇರಿಯಲ್ಲಿರಬೇಕಾದ ದಾಖಲೆಗಳು ಖಾಸಗಿ ವ್ಯಕ್ತಿಗಳ ಸ್ಥಳಗಳಿಗೆ ಹೇಗೆ ಬಂದಿವೆ ಎಂಬುದರ ಬಗ್ಗೆ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಮೇ 4ರಂದು ವಾಲ್‌ಮಾರ್ಕ್‌ ಕಂಪನಿ, ರತನ್‌ ಬಾಬುಲಾಲ್‌ ಲಾಥ್‌, ಗೌತಮ್‌, ಅಮೀತ್‌ ಜೆ. ಬೋಳಾರ್‌, ಮುನಿರಾಜಪ್ಪ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next