Advertisement

ಲಂಚ : ಎಸಿಬಿಯಿಂದ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳ ಬಂಧನ

06:37 PM May 26, 2018 | udayavani editorial |

ಥಾಣೆ : ಲಂಚ ಕೇಳಿ ಪಡೆದ ಆರೋಪದ ಮೇಲೆ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

Advertisement

ಬಂಧಿತ ಕೃಷಿ ಇಲಾಖೆಗಳೆಂದರೆ ಅಬ್ಟಾ ಸಾಹೇಬ್‌ ಅಕೋರೆ 52, ಮತ್ತು ನವನಾಥ್‌ ದಾರವಾಡ (49) ಎಂದು ಎಸಿಬಿಯ ಥಾಣೆ ಘಟಕದ ಇನ್ಸ್‌ಪೆಕ್ಟರ್‌ ಸಂಜಯ್‌ ಸಿದಗಳೆ ತಿಳಿಸಿದ್ದಾರೆ. 

ಭಿವಂಡಿ ತಾಲೂಕು ಕೃಷಿ ಇಲಾಖೆ ಕಾರ್ಯಾಲಯಕ್ಕೆ ಸಮೀಪ ಇವರನ್ನು ಎಸಿಬಿ ಹಾಕಿದ ಖೆಡ್ಡಾಗೆ ಬೀಳಿಸಲಾಯಿತು. 

ಸುಪರಿಂಟೆಂಡೆಂಟ್‌ ನವನಾಥ್‌ ಧಾರವಾಡ ಅವರು ಕೃಷಿ ಕಾರ್ಯಾಲಯಕ್ಕಾಗಿ ಸಣ್ಣದೊಂದು ಕಾಮಗಾರಿ ನಡೆಸಿದ್ದ ವ್ಯಕ್ತಿಯ ಬಿಲ್‌ ಪಾಸ್‌ ಮಾಡಲು  ಐದು ಲಕ್ಷ ರೂ. ಲಂಚ ಕೇಳಿದ್ದರು. ಅಕೋರೆ ಅವರು 2.50 ಲಕ್ಷ ರೂ. ಲಂಚ ಕೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next