Advertisement

ನನ್ನ ನಿಷ್ಠೆ ಸೇನೆಯ ಮೇಲಿದೆ, ನಾನು ಹೆದರುವುದಿಲ್ಲ: ಅಸ್ಸಾಂ ಸಿಎಂ

12:44 PM Feb 14, 2022 | Team Udayavani |

ನವದೆಹಲಿ : ಪುಲ್ವಾಮಾ ದಾಳಿಯ ವಾರ್ಷಿಕೋತ್ಸವದಂದು ಪ್ರತಿಪಕ್ಷಗಳು ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಶ್ನಿಸುವ ಮೂಲಕ ನಮ್ಮ ಹುತಾತ್ಮರನ್ನು ಮತ್ತೊಮ್ಮೆ ಅವಮಾನಿಸಿದ್ದಾರೆ ಎಂದು ಅಸ್ಸಾಂ ಸಿಎಂ ಎಚ್‌ಬಿ ಶರ್ಮಾ ಮತ್ತೆ ಕಿಡಿ ಕಾರಿದ್ದಾರೆ.

Advertisement

ಎ ಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶರ್ಮಾ, ಗಾಂಧಿ ಕುಟುಂಬಕ್ಕೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿ ಅವರು ಸೇನೆಗೆ ದ್ರೋಹ ಮಾಡಿದ್ದಾರೆ. ನನ್ನ ನಿಷ್ಠೆ ಸೇನೆಯ ಮೇಲಿದೆ. ನಿಮ್ಮ ಜೀವನದುದ್ದಕ್ಕೂ ನನ್ನನ್ನು ನಿಂದಿಸಿ, ನಾನು ಹೆದರುವುದಿಲ್ಲ ಎಂದಿದ್ದಾರೆ.

ಶರ್ಮಾ, ಕಾಂಗ್ರೆಸ್ ಟೀಕಿಸುವ ಭರದಲ್ಲಿ ರಾಹುಲ್ ಅವರು ರಾಜೀವ್ ಗಾಂಧಿ ಅವರ ಪುತ್ರ ಎಂಬುದಕ್ಕೂ ಸಾಕ್ಷಿ ಕೇಳಬೇಕೆ ಎಂದು ವಿವಾದಕ್ಕೆ ಸಿಲುಕಿದ್ದರು. ಅವರ ವಿರುದ್ಧ ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ಹೊರ ಹಾಕಿದ್ದು, ದೂರನ್ನೂ ದಾಕ್ಷಾಳು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next