Advertisement

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

12:56 AM Apr 17, 2024 | Team Udayavani |

ಪುತ್ತೂರು: ತೆಂಕುತಿಟ್ಟಿನ ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳವು ಮಸ್ಕತ್‌ ಮತ್ತು ದುಬಾೖಯಲ್ಲಿ ಮಾತೆ ದೇಯಿ ಬೈದೇತಿ ಮತ್ತು ಧೂಮಾವತಿ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆಸೇವೆ ನೀಡಲಿದ್ದು ಪೂರ್ಣ ಪ್ರಮಾಣದ ಮೇಳವೊಂದು ವಿದೇಶಿ ನೆಲದಲ್ಲಿ ಪ್ರದರ್ಶನ ನೀಡುತ್ತಿರುವುದು ಯಕ್ಷರಂಗದ ಇತಿಹಾಸದಲ್ಲಿ ಪ್ರಥಮವೆನಿಸಿದೆ ಎಂದು ಮೇಳದ ವ್ಯವಸ್ಥಾಪಕ ಪ್ರಶಾಂತ್‌ ಪೂಜಾರಿ ತಿಳಿಸಿದ್ದಾರೆ.

Advertisement

ಒಮಾನ್‌ ಬಿಲ್ಲವಾಸ್‌ ಕೂಟದ ವತಿಯಿಂದ ಮಸ್ಕತ್‌ನ ರೂವಿ ಅಲ್‌ ಫಲಾಜ್‌ ಹೊಟೇಲ್‌ ಗ್ರ್ಯಾಂಡ್‌ ಸಭಾಂಗಣದಲ್ಲಿ ಎ. 19ರಂದು ಅಪರಾಹ್ನ 3.15ರಿಂದ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಕಾರಣಿಕದ ನಿತಿನ್‌ ತೆಂಕಕಾರಂದೂರು ವಿರಚಿತ, ಯೋಗೀಶ್‌ ಕುಮಾರ್‌ ಚಿಗುರುಪಾದೆ ಪದ್ಯ ರಚನೆಯ 225ನೇ ಪ್ರಯೋಗದ ಪ್ರದರ್ಶನ ನಡೆಯಲಿದೆ.

ಎ. 20ರಂದು ಬಿಲ್ಲವ ಫ್ಯಾಮಿಲಿ ದುಬಾೖ ಕೂಟದ ವತಿಯಿಂದ ಬರ್‌ ದುಬಾೖಯ ಜದಫ್‌ ಸ್ವಿಸ್‌ ಇಂಟರ್‌ ನ್ಯಾಶನಲ್‌ ಸೈಂಟಿಫಿಕ್‌ ಸ್ಕೂಲ್‌ನ ಹಾಲ್‌ನಲ್ಲಿ ಸಂಜೆ 5ರಿಂದ 226ನೇ ಪ್ರಯೋಗದ ಯಕ್ಷಗಾನ ಪ್ರದರ್ಶನ ಕಾಣಲಿದೆ.

ಏನಿದು ಪರಿಪೂರ್ಣ ತಂಡ
ಈಗಾಗಲೇ ವಿದೇಶದಲ್ಲಿ ಅನೇಕ ಯಕ್ಷಗಾನ ಪ್ರದರ್ಶನ ನೀಡಿದ್ದರೂ ಅದು ಬೇರೆ ಮೇಳಗಳ ಆಯ್ದ ಕಲಾವಿದರ ಒಗ್ಗೂಡುವಿಕೆಯೊಂದಿಗೆ ನೀಡಿರುವ ಪ್ರದರ್ಶನ. ಆದರೆ ಒಂದು ಮೇಳ ಪೂರ್ಣ ಪ್ರಮಾಣದಲ್ಲಿ ಈ ತನಕ ಪಾಲ್ಗೊಂಡಿಲ್ಲ. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಮಾರ್ಗದರ್ಶನದಲ್ಲಿ ಮೇಳ ಮೊದಲ ಬಾರಿಗೆ ಎಂಬಂತೆ ಪೂರ್ಣ ತಂಡವಾಗಿ ತೆರಳುತ್ತಿದೆ. ಊರಿನಲ್ಲಿ ಯಕ್ಷಗಾನ ಆಗುವ ರೀತಿಯಲ್ಲೇ ವಿದೇಶಿ ನೆಲದಲ್ಲಿ ತ್ರಿಕಾಲಪೂಜೆ, ಚೌಕಿ ಪೂಜೆ ಸಹಿತ ರಂಗಸ್ಥಳ ನಿರ್ಮಿಸಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಗಿರೀಶ್‌ ರೈ ಕಕ್ಕೆಪದವು ಮತ್ತು ನಿರಂಜನ ಪೂಜಾರಿ ಬಡಗಬೆಳ್ಳೂರು ಅವರ ಭಾಗವತಿಕೆ ಇರಲಿದೆ ಎಂದು ಪ್ರಶಾಂತ್‌ ಪೂಜಾರಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next