Advertisement

ಉಳ್ಳಾಲ: ಮತ್ತೆ ಮುಂದುವರಿದ ಕಡಲ್ಕೊರೆತ

02:02 AM Jul 10, 2019 | sudhir |

ಉಳ್ಳಾಲ: ಸೋಮೇಶ್ವರ ಉಚ್ಚಿಲ, ಉಳ್ಳಾಲದಲ್ಲಿ ಮಂಗಳವಾರ ಕಡಲ್ಕೊರೆತ ಮುಂದುವರಿದಿದೆ. ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿವೆ. ಸೋಮೇಶ್ವರದಲ್ಲಿ ಬೀಚ್ ಬದಿಯ ಮೆಟ್ಟಿಲುಗಳಿಗೆ ಹಾನಿಯಾಗಿದೆ. ಉಚ್ಚಿಲದಲ್ಲಿ 2 ವಿದ್ಯುತ್‌ ಕಂಬಗಳು ತುಂಡಾಗಿವೆ.

Advertisement

ಸುಂಟರಗಾಳಿ ಅವಾಂತರ

ಕೋಟೆಕಾರು ಬೀರಿಯಲ್ಲಿ ಬೆಳಗ್ಗೆ ಕೆಲವು ನಿಮಿಷ ಬೀಸಿದ ಸುಂಟರಗಾಳಿಗೆ ಸ್ಥಳೀಯ ನಿವಾಸಿಗಳು ಭಯಭೀತರಾದರು.

ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಅಂಬೇಡ್ಕರ್‌ ಕೈಗಾರಿಕಾ ಸಂಘದ ಶೀಟ್, ಸೇರಿದಂತೆ ಸಿಮೆಂಟ್ ಅಂಗಡಿ, ಕಲ್ಲಿನ ಅಂಗಡಿ, ಕ್ಯಾಂಟಿನ್‌ನ ತಗಡುಶೀಟುಗಳು ಹಾರಿ ಎಲ್ಲೆಂದರಲ್ಲಿ ಬಿದ್ದವು. ಅಂಬೇಡ್ಕರ್‌ ಭವನದ ಛಾವಣಿಯ ಶೀಟ್ 100 ಮೀ. ದೂರದ ಸರಕಾರಿ ಪ್ರೌಢಶಾಲಾ ಕಾಂಪೌಂಡ್‌ ಒಳಗೆ ಬಿದ್ದಿತ್ತು. ಮೂರು ಕಾರುಗಳಿಗೆ ಶೀಟ್ ಬಿದ್ದು ಹಾನಿಯಾಗಿದೆ. ವಿದ್ಯುತ್‌ ಕಂಬ ತುಂಡಾಗಿ ಬಿದ್ದು ಸ್ವಲ್ಪ ಕಾಲ ವಿದ್ಯುತ್‌ ವ್ಯತ್ಯಯವಾಯಿತು.

ಮರ ಉರುಳಿ ಸಂಚಾರ ಸ್ಥಗಿತ

Advertisement

ಬ್ರಹ್ಮಾವರ: ಬ್ರಹ್ಮಾವರ – ಹೆಬ್ರಿ ಮುಖ್ಯ ರಸ್ತೆಮೇಲೆ ಕುಂಜಾಲು ಬಳಿ ಬೃಹತ್‌ ಮಾವಿನ ಮರಉರುಳಿ ಸ್ವಲ್ಪ ಸಮಯ ಸಂಚಾರ ಸ್ಥಗಿತಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next