Advertisement

ಶೂಟಿಂಗ್‌ನತ್ತ ಅಭಿಷೇಕ್‌ ಚಿತ್ತ

04:44 PM Dec 13, 2018 | Sharanya Alva |

ಅಭಿಷೇಕ್‌ ಅಂಬರೀಶ್‌ ಇದೀಗ ಚಿತ್ರೀಕರಣಕ್ಕೆ ಹೊರಡಲು ಅಣಿಯಾಗಿದ್ದಾರೆ. ತಂದೆ ಅಂಬರೀಶ್‌ ಅವರ ನಿಧನದಿಂದಾಗಿ ಅತೀವ ದುಃಖದಲ್ಲಿದ್ದ ಅಭಿಷೇಕ್‌, ಈಗ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದು, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಂಬರೀಶ್‌ ಅವರ ಭಾವಚಿತ್ರ ಹಿಡಿದು ನಿಂತಿರುವ ಫೋಟೋ ವೊಂದರ ಜೊತೆಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. “ಮತ್ತೆ ಕೆಲಸಕ್ಕೆ ತೆರಳುತ್ತಿದ್ದು, ಇದನ್ನೆಲ್ಲಾ ನನ್ನಪ್ಪ ರೆಬೆಲ್
ನೋಡುತ್ತಿದ್ದಾರೆ’ ಎಂದು ಭಾವುಕವಾಗಿ  ಬರೆದುಕೊಂಡಿದ್ದಾರೆ.

Advertisement

ಅಭಿಷೇಕ್‌ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಈ ಫೋಟೋ ಹಾಕಿಕೊಳ್ಳುತ್ತಿರುವಂತೆಯೇ, ಅಂಬರೀಶ್‌ ಅಭಿಮಾನಿಗಳು, ಆಪ್ತರು, ಗೆಳೆಯರು
ಸೇರಿದಂತೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ. ಪ್ರತಿಯೊಬ್ಬರೂ, “ನಿಮ್ಮ ತಂದೆಯವರು ನಿಮ್ಮನ್ನು ಸದಾ
ಹಾರೈಸುತ್ತಿರುತ್ತಾರೆ, ನಿಮ್ಮ ಸಿನಿಪಯಣ ಚೆನ್ನಾಗಿರಲಿ’ ಎಂದು ಹೇಳುವ ಮೂಲಕ ಶುಭಾಶಯ ಕೋರಿದ್ದಾರೆ.

ನಾಗಶೇಖರ್‌ ನಿರ್ದೇಶನದ “ಅಮರ್‌’ ಚಿತ್ರಕ್ಕೆ ಸಂದೇಶ್‌ ನಾಗರಾಜ್‌ ನಿರ್ಮಾಪಕರು. ತಾನ್ಯಹೋಪ್‌ ನಾಯಕಿಯಾಗಿದ್ದಾರೆ. 90ರ ದಶಕದಲ್ಲಿ ನಾಯಕಿಯೊಬ್ಬರ ಜೀವನದಲ್ಲಿ ನಡೆದ ಘಟನೆ ಇಟ್ಟುಕೊಂಡು “ಅಮರ್‌’ ತಯಾರಾಗುತ್ತಿದೆ. ಇಲ್ಲಿ ನಾಯಕ-ನಾಯಕಿ ಇಬ್ಬರೂ ಬೈಕ್‌ ರೇಸರ್‌ಗಳಾಗಿದ್ದು, ಚಿತ್ರದಲ್ಲಿ ಬೈಕ್‌ ರೇಸ್‌ ಸಹ ಇರಲಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next