Advertisement

Veteran Actress Leelavathi ಆರೋಗ್ಯ ವಿಚಾರಿಸಿದ ನಟ ದರ್ಶನ್‌, ಅಭಿಷೇಕ್‌ ಅಂಬರೀಶ್‌

09:49 PM Nov 27, 2023 | Team Udayavani |

ನೆಲಮಂಗಲ: ಹಿರಿಯ ನಟಿ ಲೀಲಾವತಿ ಅವರಿಗೆ ವಯೋಸಹಜ ಅನಾರೋಗ್ಯ ಹಿನ್ನೆಲೆಯಲ್ಲಿ ನಟ ದರ್ಶನ್‌ ಹಾಗೂ ಅಭಿಷೇಕ್‌ ಅಂಬರೀಶ್‌ ಅವರು ಮನೆಗೆ ಭೇಟಿ ನೀಡಿ, ವಿನೋದ್‌ ರಾಜ್‌ ಅವರಿಂದ ಆರೋಗ್ಯ ವಿಚಾರಿಸಿದರು.

Advertisement

ತಾಲೂಕಿನ ಸೋಲದೇವನಹಳ್ಳಿಯ ಡಾ.ಲೀಲಾವತಿ ತೋಟದ ಮನೆಗೆ ಭೇಟಿ ನೀಡಿದ ನಟ ದರ್ಶನ್‌, ದೇವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಲೀಲಾವತಿಯವರನ್ನು ಮಾತನಾಡಿಸಿ, ಆಶೀರ್ವಾದ ಪಡೆದುಕೊಂಡರು. ಇದೇ ಸಮಯದಲ್ಲಿ ಪುತ್ರ ವಿನೋದ್‌ರಾಜ್‌, ದರ್ಶನ್‌ ಬಂದಿದ್ದಾರೆ ಎಂದು ಹೇಳಿದಾಗ ಲೀಲಾವತಿಯವರು ಮಾತನಾಡುವ ಪ್ರಯತ್ನ ಮಾಡಿದ್ದು ಕಂಡುಬಂತು. ದರ್ಶನ್‌ ಭೇಟಿ ನಂತರ ಅಭಿಷೇಕ್‌ ಅಂಬರೀಶ್‌ ಹಾಗೂ ಅನೇಕ ಕಲಾವಿದರು ಬಂದು ಆರೋಗ್ಯ ವಿಚಾರಿಸಿದ್ದಾರೆ.

ಆರೋಗ್ಯದಲ್ಲಿ ಚೇತರಿಕೆ: 85 ವರ್ಷದ ಲೀಲಾವತಿಯವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ಬಂದಿದ್ದು ದ್ರವರೂಪದ ಆಹಾರವನ್ನು ಮುಂದುವರಿಸಿದ್ದಾರೆ. ಅಮ್ಮ ಚೇತರಿಕೆಯಾಗುತ್ತಿದ್ದು ಅವರ ಆರೈಕೆ ಮಾಡುತ್ತಿರುವುದಾಗಿ ವಿನೋದ್‌ರಾಜ್‌ ಹೇಳಿದ್ದಾರೆ.

ನಟ ದರ್ಶನ್‌ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಅಮ್ಮನವರ ಕೊಡುಗೆ ಅಪಾರ. ಅವರ ಸಿನಿಮಾವನ್ನು ನೋಡಿಕೊಂಡು ಬೆಳೆದಿದ್ದೇವೆ. ಚಿತ್ರರಂಗದ ಜತೆಗೆ ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸ್ಪತ್ರೆ ಹಾಗೂ ಪ್ರಾಣಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.

ನ.28 ರಂದು ಆಸ್ಪತ್ರೆ ಉದ್ಘಾಟನೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಲೀಲಾವತಿಯವರ ಕನಸಿನ ಆಸ್ಪತ್ರೆಯನ್ನು ನ.28ರ ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next