Advertisement

Mangaluru ಅನ್ಯ ಧರ್ಮದ ಯುವಕನಿಂದ ವಿದ್ಯಾರ್ಥಿನಿಯ ಅಪಹರಣ; ಕಾಸರಗೋಡಿನಲ್ಲಿ ಪತ್ತೆ

11:48 PM Jul 10, 2024 | Team Udayavani |

ಮಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಧರ್ಮದ ವಿದ್ಯಾರ್ಥಿನಿಯೊಬ್ಬಳನ್ನು ಅನ್ಯ ಧರ್ಮದ ಯುವಕ ಅಪಹರಿಸಿದ ಘಟನೆ ನಡೆದಿದ್ದು ಈರ್ವರನ್ನು ಕೂಡ ಪೊಲೀಸರು ಪತ್ತೆ ಮಾಡಿದ್ದಾರೆ.

Advertisement

ಕಾಸರಗೋಡಿನ ವಿದ್ಯಾನಗರ ನಿವಾಸಿ ಮುಹಮ್ಮದ್‌ ಅಶ್ಫಾಕ್‌ ಪ್ರಕರಣದ ಆರೋಪಿ. ಯುವತಿ ಉಳ್ಳಾಲದ ಸಂಬಂಧಿಕರ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದಳು. ಆರೋಪಿ ಜೂ.30ರಂದು ವಿದ್ಯಾರ್ಥಿನಿಯನ್ನು ಉಳ್ಳಾಲದಿಂದಲೇ ಅಪಹರಿಸಿ ಕೊಚ್ಚಿಗೆ ಕರೆದೊಯ್ದಿದ್ದ. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಮತ್ತು ಯುವತಿಯನ್ನು ಕಾಸರಗೋಡಿನಲ್ಲಿ ಪತ್ತೆ ಮಾಡಿದ್ದು ಯುವತಿಯನ್ನು ನಗರದ ಸಲಹಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.

ಆರೋಪಿ ಮಹಮ್ಮದ್‌ ಅಶ್ಫಾಕ್‌ನ ಮೇಲೆ ಕಾಸರಗೋಡಿನ ನಾನಾ ಪೊಲೀಸ್‌ ಠಾಣೆಯಲ್ಲಿ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈತನಿಗೆ ಈ ಹಿಂದೆಯೇ ಮದುವೆಯಾಗಿತ್ತು.

ತಂದೆಯಿಂದ ಪೊಲೀಸ್‌ ಆಯುಕ್ತರಿಗೆ ದೂರು
ಯುವತಿಯ ತಂದೆ ಈ ಬಗ್ಗೆ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಮಗಳನ್ನು ಮತಾಂತರ ಗೊಳಿಸುವುದಕ್ಕಾಗಿ ಅಪಹರಣ ನಡೆಸಲಾಗಿದೆ.ಅಶ#ಕ್‌ ಮತ್ತು ಆತನ ತಂಡದಿಂದ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಲವ್‌ ಜೆಹಾದ್‌: ವಿಎಚ್‌ಪಿ
ಇದು ಮತ್ತೊಂದು ಲವ್‌ ಜೆಹಾದ್‌ ಪ್ರಕರಣವಾಗಿದೆ. ಕರಾವಳಿ ಭಾಗದಲ್ಲಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮತಾಂತರ, ಲವ್‌ ಜೆಹಾದ್‌ ಪ್ರಕರಣಗಳು ಹೆಚ್ಚುತ್ತಿದ್ದು ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಲವ್‌ ಜೆಹಾದ್‌ ತಡೆಯಲು ಪ್ರಬಲ ಕಾನೂನು ಜಾರಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ ವೆಲ್‌ ಒತ್ತಾಯಿಸಿದ್ದಾರೆ.

Advertisement

ತನಿಖೆಗೆ ಶ್ರೀ ರಾಮಸೇನೆ ಆಗ್ರಹ
ಪಾಂಡೇಶ್ವರ ಠಾಣೆಯಲ್ಲಿ ದಾಖಲಾದ ಪ್ರಕರಣ ಲವ್‌ ಜೆಹಾದ್‌ ಆಗಿದ್ದು, ಇದರ ವಿರುದ್ದ ಗಂಭೀರ ತನಿಖೆಯ ಅಗತ್ಯವಿದೆ ಎಂದು ಶ್ರೀ ರಾಮಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್‌ ಶೆಟ್ಟಿ ಅಡ್ಯಾರ್‌ ಆಗ್ರಹಿಸಿದ್ದಾರೆ.

ಇದೊಂದು ವ್ಯವಸ್ಥಿತ ಮತಾಂತರ ಜಾಲವಾಗಿದ್ದು ಇದರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next