Advertisement

ಖಾಸಗಿ ಬಸ್‌ ಸಿಬ್ಬಂದಿ ವಿರುದ್ಧ ಅಪಹರಣ ದೂರು

12:53 AM May 12, 2019 | Team Udayavani |

ಬೆಂಗಳೂರು: ವೇಗವಾಗಿ ಬಂದಿದ್ದನ್ನು ಪ್ರಶ್ನಿಸಿದಕ್ಕೆ ಖಾಸಗಿ ಬಸ್‌ ಚಾಲಕ ಸೇರಿ ಮೂರು ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿ, ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಕ್ಯಾಬ್‌ ಚಾಲಕ, ಪೀಣ್ಯ ಪೊಲೀಸರಿಗೆ ದೂರು ನೀಡಿದ್ದಾನೆ. ನಾಗಸಂದ್ರ ನಿವಾಸಿ ರಘು (22) ನೀಡಿದ ದೂರಿನಂತೆ ಪೀಣ್ಯ ಪೊಲೀಸರು, ಖಾಸಗಿ ಬಸ್‌ ಚಾಲಕ ಹರೀಶ್‌ ಹಾಗೂ ಕ್ಲಿನರ್‌ ಅಭಿಲಾಷ್‌ ಹಾಗೂ ಮತ್ತೂಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಕ್ಯಾಬ್‌ ಚಾಲಕ ರಘು, ಶುಕ್ರವಾರ ರಾತ್ರಿ 9 ಗಂಟೆಗೆ ಶರತ್‌ ಎಂಬವರಿಂದ ಹಣ ಪಡೆಯಲು ಸ್ನೇಹಿತ ಮಂಜುನಾಥ್‌ ಎಂಬವರ ಜತೆ ಬೈಕ್‌ನಲ್ಲಿ ನವರಂಗ್‌ನಿಂದ ತುಮಕೂರು ರಸ್ತೆಯ ನವಯುಗ ಟೋಲ್‌ಗೇಟ್‌ ಬಳಿ ಹೋಗಿದ್ದರು. ವಾಪಸ್‌ ಬರುವಾಗ ಟೋಲ್‌ ಗೇಟ್‌ ಬಳಿ ಖಾಸಗಿ ಬಸ್‌ ಒಂದು, ರಘು ಅವರ ಬೈಕ್‌ಗೆ ಡಿಕ್ಕಿ ಹೊಡೆಯುವಂತೆ ಬಂದಿದೆ.

ಆತಂಕಗೊಂಡ ರಘು, ನಿಧಾನವಾಗಿ ಚಾಲನೆ ಮಾಡುವಂತೆ ಚಾಲಕನಿಗೆ ಸೂಚಿಸಿದ್ದರು. ಇದರಿಂದ ಕೋಪಗೊಂಡ ಬಸ್‌ ಕ್ಲೀನರ್‌ ಅಭಿಲಾಷ್‌ ಹಾಗೂ ಚಾಲಕ ಹರೀಶ್‌, ರಘು ಮತ್ತು ಮಂಜುನಾಥ್‌ನನ್ನು ಬೈಕ್‌ನಿಂದ ತಳ್ಳಿ, ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಬಲವಂತವಾಗಿ ರಘು ಅವರನ್ನು ಬಸ್‌ನೊಳಗೆ ಎಳೆದೊಯ್ದು, ರಾಡ್‌ನಿಂದ ಒಡೆದು, ಅಪಹರಣ ಮಾಡಿದ್ದಾರೆ.

ಶನಿವಾರ ಮುಂಜಾನೆ 4 ಗಂಟೆಗೆ ಸಕಲೇಶಪುರದಲ್ಲಿ ಬಸ್‌ ನಿಲ್ಲಿಸಿದಾಗ ಚ್ಚರಗೊಂಡ ರಘು, ಬಸ್‌ನಿಂದ ಇಳಿದು ತಪ್ಪಿಸಿಕೊಂಡು ನಗರಕ್ಕೆ ಬಂದಿದ್ದಾರೆ. ಈ ಸಂಬಂಧ ರಘು ದೂರು ನೀಡಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next