Advertisement

ಖುಲಾಸೆ ತೀರ್ಪು ಬಳಿಕ ಇಂದು ಜೈಲಿನಿಂದ ತಲ್ವಾರ್‌ ದಂಪತಿ ಬಿಡುಗಡೆ

10:40 AM Oct 13, 2017 | Team Udayavani |

ಹೊಸದಿಲ್ಲಿ : ಆರುಷಿ – ಹೇಮರಾಜ್‌ ಕೊಲೆ ಪ್ರಕರಣದಲ್ಲಿ ಅಲಹಾಬಾದ್‌ ಕೋರ್ಟ್‌ ನಿಂದ ಖುಲಾಸೆಗೊಂಡಿರುವ,ವೃತ್ತಿಯಲ್ಲಿ ದಂತ ವೈದ್ಯರಾಗಿರುವ, ರಾಜೇಶ್‌ ಮತ್ತು ನೂಪುರ್‌ ತಲ್ವಾರ್‌ ಇಂದು ಶುಕ್ರವಾರ ಘಾಜಿಯಾಬಾದ್‌ನ ದಾಸ್ನಾ ಜೈಲಿನಿಂದ ಹೊರಬೀಳಲಿದ್ದಾರೆ.

Advertisement

2013ರ ನೆವೆಂಬರ್‌ ಸಿಬಿಐ ವಿಶೇಷ ನ್ಯಾಯಾಲಯ ತಲ್ವಾರ್‌ ದಂಪತಿಯನ್ನು ಕೊಲೆ ಅಪರಾಧಿಗಳೆಂದು ಪರಿಗಣಿಸಿ ಜೀವಾವಧಿ ಜೈಲು ಶಿಕ್ಷೆಯನ್ನು ನೀಡಿದ ಬಳಿಕ, ಈ ದಂಪತಿ ಘಾಜಿಯಾಬಾದ್‌ ನ ದಾಸ್ನಾ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿತ್ತು. 

ತಲ್ವಾರ್‌ ದಂಪತಿಯ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್‌ ಹೈಕೋರ್ಟಿನ ನ್ಯಾಯಾದೀಶರಾದ ಜಸ್ಟಿಸ್‌ ಬಾಲಕೃಷ್ಣ ನಾರಾಯಣ್‌ ಮತ್ತು ಅರವಿಂದ ಕುಮಾರ್‌ ಮಿಶ್ರಾ ಅವರು, ರಾಜೇಶ್‌ ಹಾಗೂ ನೂಪುರ್‌ ದಂಪತಿಯನ್ನು ಖುಲಾಸೆಗೊಳಿಸಿ ತತ್‌ಕ್ಷಣವೇ ಜೈಲಿನಿಂದ ಬಿಡುಗಡೆ ಮಾಡವಂತೆ ಅಧಿಕಾರಿಗಳಿಗೆ ಸೂಚಿಸಿ ತೀರ್ಪು ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next