Advertisement

AAP ಸಂಸದ ರಾಘವ್ ಚಡ್ಡಾ ತಲೆಗೆ ಕುಟುಕಿದ ಕಾಗೆ; ಬಿಜೆಪಿ ವ್ಯಂಗ್ಯ

03:44 PM Jul 26, 2023 | Team Udayavani |

ಹೊಸದಿಲ್ಲಿ:ಮುಂಗಾರು ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ತಲೆಗೆ ಸಂಸತ್ ಆವರಣದಲ್ಲಿ ಕಾಗೆಯೊಂದು ಕುಟುಕಿದ ಘಟನೆ ನಡೆದಿದೆ. ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ.

Advertisement

ಮೊಬೈಲ್ ನಲ್ಲಿ ಮಾತನಾಡುತ್ತಾ ಬರುತ್ತಿದ್ದ ರಾಘವ್ ಚಡ್ಡಾ ಕಾಗೆ ದಾಳಿಯಿಂದ ಪಾರಾಗಲು ಪ್ರಯತ್ನಿಸುತ್ತಿರುವುದನ್ನು ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಬಹುದು.

”ಸುಳ್ಳು ಹೇಳುವವರನ್ನು ಕಾಗೆ ಕಚ್ಚುತ್ತದೆ ಎಂದು ಇವತ್ತಿನವರೆಗೂ ಕೇಳಿದ್ದೆವು, ಇವತ್ತು ಕಾಗೆ ಕಚ್ಚಿದ್ದು ಕೂಡ ನೋಡಿದೇವು!” ಎಂದು ದೆಹಲಿ ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

ಮಣಿಪುರ ಹಿಂಸಾಚಾರ ವಿಚಾರದಲ್ಲಿ ರಾಜ್ಯಸಭೆಯಲ್ಲಿ ಮತ್ತು ಮಾಧ್ಯಮಗಳಲ್ಲಿ ಮುಂಚೂಣಿಯಲ್ಲಿ ಇದ್ದು ಯುವ ನಾಯಕ ಚಡ್ಡಾ ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next