Advertisement

AAP; ಹರಿಯಾಣದಲ್ಲಿ ಪಂಚ ಗ್ಯಾರಂಟಿ ಘೋಷಣೆ: ಸುನೀತಾ ಕೇಜ್ರಿವಾಲ್ ಪ್ರಚಾರ ಸಾರಥ್ಯ

06:28 PM Jul 20, 2024 | Team Udayavani |

ಪಂಚಕುಲ: ಹರಿಯಾಣದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಆರಂಭವಾಗಿದ್ದು ಆಮ್ ಆದ್ಮಿ ಪಕ್ಷ ( AAP) ಗ್ಯಾರಂಟಿಗಳನ್ನು ಶನಿವಾರ ಪ್ರಕಟಿಸಿದೆ.

Advertisement

ಪಕ್ಷದ ಸಂಸ್ಥಾಪಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಪತ್ನಿ ಪ್ರಚಾರ ಆರಂಭಿಸಿ ಪಂಚ ಗ್ಯಾರಂಟಿಗಳನ್ನು ಪಕ್ಷದ ಪ್ರಮುಖ ನಾಯಕರೊಂದಿಗೆ ಘೋಷಣೆ ಮಾಡಿ ಆಡಳಿತಾರೂಢ ಬಿಜೆಪಿಗೆ 1 ಸ್ಥಾನವೂ ಬರಬಾರದು ಎಂದು ಗುಡುಗಿದ್ದಾರೆ. ಆಪ್ ಇಂಡಿಯಾ ಮೈತ್ರಿಕೂಟದಲ್ಲಿದ್ದರೂ ಹರಿಯಾಣದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಎಲ್ಲ 90 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ.

ಆಪ್ ನ 5 ಗ್ಯಾರಂಟಿಗಳು: 24 ಗಂಟೆಗಳ ಉಚಿತ ವಿದ್ಯುತ್, ಉಚಿತ ಚಿಕಿತ್ಸೆ, ಉಚಿತ ಶಿಕ್ಷಣ, ಎಲ್ಲ ಮಹಿಳೆಯರಿಗೆ ತಿಂಗಳಿಗೆ 1,000 ರೂ, ಪ್ರತಿ ಯುವಕನಿಗೆ ಉದ್ಯೋಗವನ್ನು ಒದಗಿಸುವ ಭರವಸೆಗಳನ್ನು ನೀಡಿದೆ.

ಸುನೀತಾ ಕೇಜ್ರಿವಾಲ್ ಮಾತನಾಡಿ ಅರವಿಂದ್ ಕೇಜ್ರಿವಾಲ್ ದೇಶದ ರಾಜಧಾನಿಯನ್ನು ಆಳುತ್ತಾರೆ ಎಂದು ಯಾರೂ ಕನಸಿನಲ್ಲಿಯೂ ಊಹಿಸಿರಲಿಲ್ಲ. ಇದು ಸಣ್ಣ ವಿಷಯವಲ್ಲ, ಇದು ಪವಾಡಕ್ಕಿಂತ ಕಡಿಮೆಯಲ್ಲ. ನನಗೆ ಅನಿಸುತ್ತದೆ. ಅವರು ಏನನ್ನಾದರೂ ಮಾಡಬೇಕೆಂದು ದೇವರು ಖಂಡಿತವಾಗಿಯೂ ಬಯಸುತ್ತಿದ್ದಾನೆ’ ಎಂದರು.

Advertisement

ಪಂಜಾಬ್ ಸಿಎಂ ಭಗವಂತ್ ಮಾನ್ ಮಾತನಾಡಿ ‘ನಾವು ರಾಜಕೀಯವನ್ನು ವ್ಯಾಪಾರ ಎಂದು ಪರಿಗಣಿಸುವುದಿಲ್ಲ.ಇದು ಕೇವಲ ವೃತ್ತಿಯಲ್ಲ ಆದರೆ ನಮಗೆ ಉತ್ಸಾಹವಾಗಿದೆ. ಪ್ರತಿಪಕ್ಷಗಳು ಒಳ್ಳೆಯವರಾಗಿದ್ದರೆ, ನಾವು ಪಕ್ಷವನ್ನು ರಚಿಸಬೇಕಾಗಿರಲ್ಲ. ಅವರು ನಮಗೆ ಸವಾಲೆಸೆದರು.ಹರಿಯಾಣದ ಜನರು ಪ್ರತಿ ಪಕ್ಷಕ್ಕೂ ಸಮಯ ಮತ್ತು ಅವಕಾಶವನ್ನು ನೀಡಿದರು, ಆದರೆ ಯಾವುದೂ ಒಳ್ಳೆಯದನ್ನು ಮಾಡಿಲ್ಲ ಎಂದರು.

2019 ರಲ್ಲಿ 40 ಸ್ಥಾನ ಗೆದ್ದ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಸ್ಪಷ್ಟ ಬಹುಮತ ಪಡೆದಿರಲಿಲ್ಲ. ಜನನಾಯಕ ಜನತಾ ಪಕ್ಷ ಮತ್ತು ಏಳು ಸ್ವತಂತ್ರ ಶಾಸಕರೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿ ಸರ್ಕಾರವನ್ನು ರಚಿಸಿತ್ತು. ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿಕೊಂಡಿತ್ತು. ಆಪ್ 2019 ರ ವಿಧಾನಸಭಾ ಚುನಾವಣೆಯಲ್ಲಿ 46 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ರಾಜ್ಯದೆಲ್ಲೆಡೆ ಒಟ್ಟು 59,839 ಮತಗಳನ್ನು ಮಾತ್ರ ಪಡೆದಿತ್ತು. ಈಗ ಸಂಘಟನೆಯನ್ನು ಬಲಪಡಿಸಿಕೊಂಡಿದೆ.

ಲೋಕ ಸಮರದಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ

ಆಪ್ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಕಾಂಗ್ರೆಸ್ 9 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿ ಐದು ಸ್ಥಾನಗಳನ್ನು ಗೆದ್ದಿತ್ತು. ಆಪ್ ಕುರುಕ್ಷೇತ್ರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಪ್ರಬಲ ಸ್ಪರ್ಧೆ ನೀಡಿತ್ತಾದರೂ ಗೆಲ್ಲಲಿಲ್ಲ. ಕುರುಕ್ಷೇತ್ರ ಕ್ಷೇತ್ರದಿಂದ ಶೀಲ್ ಗುಪ್ತಾ ಅವರು 29 ಸಾವಿರ ಮತಗಳಿಂದ ಬಿಜೆಪಿಯ ನವೀನ್ ಜಿಂದಾಲ್ ವಿರುದ್ಧ ಸೋಲು ಅನುಭವಿಸಿದ್ದರು. ಬಿಜೆಪಿ ಸಿಎಂ ನಯಬ್ ಸಿಂಗ್ ಸೈನಿ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುವ ಸಾಧ್ಯತೆ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next