Advertisement

ಆಮ್‌ ಆದ್ಮಿ ಪಕ್ಷದ ಚುನಾವಣಾ ಅಭ್ಯರ್ಥಿ ಶವ ಪತ್ತೆ; ಕೊಲೆ ಶಂಕೆ

04:47 PM Sep 10, 2018 | Team Udayavani |

ಚಂಡೀಗಢ : ಆಮ್‌ ಆದ್ಮಿ ಪಕ್ಷದ ಸ್ಥಳೀಯಾಡಳಿತೆ ಚುನಾವಣೆ ಅಭ್ಯರ್ಥಿ ಹರ್ವಿಂದರ್‌ ಸಿಂಗ್‌ ಹಿಂದಾ (42) ಅವರ ಶವ ಇಂದು ಪಂಜಾಬಿನ ಬಟಿಂಡಾ ಜಿಲ್ಲೆಯ ಜೇತುಕೆ ಗ್ರಾಮದಲ್ಲಿನ ಅವರ ಮನೆ ಸಮೀಪ ಪತ್ತೆಯಾಗಿದ್ದು ಇವರು ಕೊಲೆಯಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. 

Advertisement

ಹರ್ವಿಂದರ್‌ ಅವರು ಗಿಲ್‌ ಕಲಾನ್‌ ಜಿಲ್ಲಾ ಪರಿಷತ್‌ ವಲಯದಿಂದ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. 

“ಹರ್ವಿಂದರ್‌ ಸಾವಿನ ಬಗ್ಗೆ ಇಂದು ಬೆಳಗ್ಗೆ ನಮಗೆ ಗೊತ್ತಾಯಿತು; ಅವರ ತಲೆಯಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ; ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ’ ಎಂದು ಬಟಿಂಡಾ ಎಸ್‌ಎಸ್‌ಪಿ ನಾನಕ್‌ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next