Advertisement

ಆಮ್‌ ಆದ್ಮಿಯಿಂದ ರಾಷ್ಟ್ರಪತಿಗೆ ಮನವಿ

01:28 PM Apr 01, 2022 | Team Udayavani |

ಜೇವರ್ಗಿ: ಆಮ್‌ ಆದ್ಮಿ ಪಕ್ಷದ ಪ್ರಮುಖ ಹಾಗೂ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಮೇಲೆ ಹಲ್ಲೆ, ಕೊಲೆ ಯತ್ನ ನಡೆಸಲಾಗಿದ್ದು, ಕೂಡಲೇ ಹಲ್ಲೆ ಮಾಡಲೆತ್ನಿಸಿದ್ದ ಆರೋಪಿಗಳನ್ನು ಬಂಧಿಸಬೇಕು. ಕೇಜ್ರಿವಾಲ್‌ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ತಾಲೂಕು ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

Advertisement

ದೇಶವೇ ಕಂಡು ಕೇಳರಿಯದ ಮಹತ್ತರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಜನಾನುರಾಗಿ ಸರ್ಕಾರವಾಗಿ ಆಪ್‌ ಹೊರಹೊಮ್ಮಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಂಜಾಬ್‌ ರಾಜ್ಯವನ್ನು ಆಮ್‌ ಆದ್ಮಿ ಪಕ್ಷ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಭಿವೃದ್ದಿ ಸಹಿಸದ ಪಟ್ಟಭದ್ರ ಹಿತಾಸಕ್ತಿ ಪಕ್ಷಗಳು ಕೇಜ್ರಿವಾಲ ಮೇಲೆ ಹಲ್ಲೆಗೆ ಪ್ರಯತ್ನಿಸಿವೆ. ಅಭಿವೃದ್ಧಿ ನೇತಾರ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ ಅವರಿಗೆ ಸೂಕ್ತ ರಕ್ಷಣೆ ನೀಡದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಸಿದರು.

ಆಮ್‌ ಆದ್ಮಿ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಈರಣ್ಣಗೌಡ ಪಾಟೀಲ ಗೂಳ್ಳಾಳ, ಬಸವರಾಜ ಹರವಾಳ, ದೌಲತ್ರಾಯ ಕುಂಬಾರ, ಭಾಷಾಪಟೇಲ ಯಾಳವಾರ, ಅಬ್ದುಲ ಕರೀಮ ಕೂಡಿಕರ್‌, ಹೀಬ ಜಮಾದಾರ, ಪರಮಾನಂದ ಯಲಗೋಡ, ಶರಣು ನೇರಡಗಿ, ಅಬ್ದುಲಸಾಬ್‌ ಮಲ್ಲಾಬಾದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next