Advertisement

ಆಧಾರ್‌ ಕೊಡಲೇಬೇಕು ಎಂದರೆ 1 ಕೋಟಿ ದಂಡ!

06:00 AM Dec 20, 2018 | Team Udayavani |

ನವದೆಹಲಿ: ಗುರುತು ಹಾಗೂ ವಿಳಾಸ ದಾಖಲೆಯನ್ನಾಗಿ ಅಧಾರ್‌ ನೀಡಲೇಬೇಕು ಎಂದು ಟೆಲಿಕಾಂ ಕಂಪನಿಗಳು ಹಾಗೂ ಬ್ಯಾಂಕ್‌ಗಳು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಹಾಗೇನಾದರೂ ಒತ್ತಾಯ ಮಾಡಿದರೆ 1 ಕೋಟಿ ರೂ. ದಂಡ ತೆರಬೇಕಾಗುತ್ತದೆ. ಅಷ್ಟೇ ಅಲ್ಲ, ಹೀಗೆ ಒತ್ತಾಯ ಮಾಡಿದ ಸಿಬ್ಬಂದಿಯು 10 ವರ್ಷಗಳವರೆಗೆ ಜೈಲು ವಾಸ ಅನುಭವಿಸಬೇಕಾಗುತ್ತದೆ.

Advertisement

ಈ ದಂಡದ ವಿವರಗಳನ್ನು ಕೇಂದ್ರ ಸರ್ಕಾರ ಸೋಮವಾರ ಅನುಮೋದಿಸಿದ ತಿದ್ದುಪಡಿಯಲ್ಲಿ ವಿವರಿಸಲಾಗಿದೆ. ಕೆವೈಸಿ ನಿಯಮಾವಳಿಯನ್ನು ಪೂರೈಸಲು ಗ್ರಾಹಕರು ಆಧಾರ್‌ ನೀಡುವುದು ಸಂಪೂರ್ಣವಾಗಿ ಐಚ್ಛಿಕವಾಗಿರಲಿದ್ದು, ಆಧಾರ್‌ ಮಾತ್ರ ನೀಡುವಂತೆ ಗ್ರಾಹಕರನ್ನು ಒತ್ತಾಯ ಮಾಡುವಂತಿಲ್ಲ.ಇತ್ತೀಚೆಗೆ ಆಧಾರ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಣ ದುರ್ಬಳಕೆ ಕಾಯ್ದೆ ಮತ್ತು ಭಾರತೀಯ ಟೆಲಿಗ್ರಾಫ್ ಕಾಯ್ದೆಗೆ ತಿದ್ದುಪಡಿ ಪ್ರಸ್ತಾಪಿಸಿದೆ. 

ಆಧಾರ್‌ ಡೇಟಾ ದುರ್ಬಳಕೆ ಮಾಡಲು ಪ್ರಯತ್ನಿಸಿದರೆ 50 ಲಕ್ಷ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ಕೂಡ ತಿದ್ದುಪಡಿಯಲ್ಲಿದೆ.

ಇನ್ನೊಂದೆಡೆ ಆಧಾರ್‌ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೂ ಮೊದಲು ಗ್ರಾಹಕರಿಂದ ಸಮ್ಮತಿ ಪಡೆಯದೇ ಇದ್ದರೆ 10 ಸಾವಿರ ರೂ. ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಐಡಿ ಅಥವಾ ಫೋಟೋಗಳನ್ನು ಅನಧಿಕೃತವಾಗಿ ಪ್ರಕಟಿಸಿದರೆ 10 ಸಾವಿರ ರೂ. ಇಂದ 1 ಲಕ್ಷ ರೂ.ವರೆಗೆ ಶಿಕ್ಷೆ ವಿಧಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next