Advertisement

ಆಧಾರ್‌ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಸ್ತು

02:08 AM Jul 05, 2019 | Team Udayavani |

ಹೊಸದಿಲ್ಲಿ: ಬ್ಯಾಂಕುಗಳಲ್ಲಿ ಠೇವಣಿ ಖಾತೆಗಳನ್ನು ಆರಂಭಿಸಲು ಆಧಾರ್‌ ಕಾರ್ಡನ್ನು ಗುರುತಿನ ಚೀಟಿಯಾಗಿ ಬಳಸುವುದನ್ನು ಸಾರ್ವಜನಿಕರ ಐಚ್ಛಿಕ ವಿಚಾರವಾಗಿಸುವ ಪ್ರಸ್ತಾವನೆಗೆ ಆಧಾರ್‌ ಹಾಗೂ ಇತರ ಕಾನೂನುಗಳ ತಿದ್ದುಪಡಿ (2019) ವಿಧೇಯಕಕ್ಕೆ ಲೋಕಸಭೆ ಧ್ವನಿಮತದ ಒಪ್ಪಿಗೆ ನೀಡಿದೆ. ಖಾಸಗಿ ಸಂಸ್ಥೆಗಳು ತಮ್ಮ ಗ್ರಾಹಕರ ಆಧಾರ್‌ ಮಾಹಿತಿ ಸಂಗ್ರಹಿಸಿದರೆ ಅಂಥ ಸಂಸ್ಥೆಗಳಿಗೆ 1 ಕೋಟಿ ರೂ. ದಂಡ ವಿಧಿಲಾಗುತ್ತದೆ.

Advertisement

ವೈಎಸ್‌ಆರ್‌ಪಿ, ಟಿಡಿಪಿ ಕಿತ್ತಾಟ: ಆಂಧ್ರದಲ್ಲಿ ತೆಲುಗುದೇಶಂ ಪಕ್ಷ ಅಧಿಕಾರದಲ್ಲಿದ್ದಾಗ, ಆಧಾರ್‌ ಮಾಹಿತಿ ಸೋರಿಕೆಯಾಗಿವೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಲೋಕಸಭೆಯಲ್ಲಿ ಆರೋಪಿಸಿತು. ಇದಕ್ಕೆ, ಟಿಡಿಎಂ ಸಂಸದರು ಆಕ್ಷೇಪಿಸಿದ್ದರಿಂದ ಗದ್ದಲವಾಯಿತು.

ಹೊಸ ಇ-ಜಾಲತಾಣ: ಇದೇ ವೇಳೆ, ದೇಶದ ಸಣ್ಣ ಕೈಗಾರಿಗಳ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳು ಜನರಿಗೆ ಆನ್‌ಲೈನ್‌ ಮೂಲಕ ತಲುಪುವಂತೆ ಮಾಡಲು ಜಾಲತಾಣವೊಂದನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next