Advertisement

ಆಧಾರ್‌ ನೋಂದಣಿಗೆ ವಿದ್ಯಾರ್ಥಿಗಳ ಪರದಾಟ

02:26 PM Jul 16, 2019 | Team Udayavani |

ಬಾದಾಮಿ: ಪಟ್ಟಣದ ಅಂಚೆ ಇಲಾಖೆಯ ಆವರಣದಲ್ಲಿ ಆಧಾರ್‌ ಕಾರ್ಡ್‌ ನೋಂದಣಿಗೆ ನೂಕುನುಗ್ಗಲು ಉಂಟಾಗಿದೆ.

Advertisement

ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಜಮಾ ಮಾಡಲು ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಲಿಂಕ್‌ ಮಾಡಬೇಕು. ಆಧಾರ್‌ ಲಿಂಕ್‌ ಮಾಡದಿದ್ದರೆ ಹಣ ಜಮೆ ಆಗುವುದಿಲ್ಲ. ಹೀಗಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು.

ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಒಟ್ಟು 42 ಸಾವಿರ ವಿದ್ಯಾರ್ಥಿಗಳ ಆಧಾರ್‌ ಕಾರ್ಡ್‌ ಲಿಂಕ್‌ ಆಗಬೇಕು. ಇದರಲ್ಲಿ ಇನ್ನೂ 2,004 ವಿದ್ಯಾರ್ಥಿಗಳು ಆಧಾರ ಲಿಂಕ್‌ ಮಾಡಬೇಕಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ.ಮಾಗಿ ತಿಳಿಸಿದರು. ಉಳಿದ 2,004 ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆ ಲಿಂಕ್‌ ಮಾಡಲು ಬಾದಾಮಿ, ಕೆರೂರ ಮತ್ತು ಗುಳೇದಗುಡ್ಡ ಅಂಚೆ ಇಲಾಖೆಯಲ್ಲಿ ನೋಂದಣಿ ಮಾಡಿಸಲು ಸಿಆರ್‌ಸಿ ಕೇಂದ್ರಗಳಿಗೆ ಆಧಾರ್‌ ಪಡೆಯಲು ತಿಳಿಸಿದ್ದಾರೆ ಎಂದರು.

ಆಧಾರ್‌ ಲಿಂಕ್‌ ಇಲ್ಲದ ಶಾಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಮತ್ತು ಶಾಲಾ ಶಿಕ್ಷಕರೊಂದಿಗೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next