Advertisement

NREGA: ಆಧಾರ್‌ ಗಡುವು ವಿಸ್ತರಣೆ ಇಲ್ಲ

09:00 PM Aug 24, 2023 | Team Udayavani |

ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯ ಕಾರ್ಮಿಕರಿಗೆ ವೇತನ ಪಾವತಿಸುವ ಏಕೈಕ ವಿಧಾನವಾಗಿ ಆಧಾರ್‌ ಕಾರ್ಡ್‌ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್‌)ಯನ್ನು ಕಡ್ಡಾಯಗೊಳಿಸಲಾಗಿದೆ.

Advertisement

ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಆಗಸ್ಟ್‌ 31ರ ವರೆಗೆ ಗಡುವು ನೀಡಲಾಗಿದ್ದು, ಈ ಗಡುವನ್ನು ವಿಸ್ತರಿಸಲಾಗುವುದಿಲ್ಲವೆಂದು ಸರ್ಕಾರಿ ಮೂಲಗಳು ಗುರುವಾರ ತಿಳಿಸಿವೆ. ಈ ಮೊದಲು ಎಬಿಪಿಎಸ್‌ ಅಳವಡಿಕೆಗೆ ಫೆಬ್ರವರಿ 1ರ ಗಡುವು ನೀಡಲಾಗಿತ್ತು. ಬಳಿಕ ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿತ್ತು. ನಂತರ ಬೇಡಿಕೆಯ ಮೇರೆಗೆ ಜೂನ್‌ 30ರವರೆಗೆ, ಬಳಿಕ ಆಗಸ್ಟ್‌ 31ರವರೆಗೂ ಗಡುವನ್ನು ವಿಸ್ತರಿಸಲಾಗಿದೆ. ಆದರೆ, ಈಗ ನೀಡಿರುವ ಗಡುವು ಅಂತಿಮವಾಗಿದ್ದು, ಈಗಾಗಲೇ ಶೇ.90ರಷ್ಟು ಸಕ್ರಿಯ ಕಾರ್ಮಿಕರ ಖಾತೆಗಳು ಆಧಾರ್‌ಗೆ ಲಿಂಕ್‌ ಆಗಿರುವ ಹಿನ್ನೆಲೆಯಲ್ಲಿ ಮತ್ತೆ ಗಡುವು ವಿಸ್ತರಣೆ ಸಾಧ್ಯವಿಲ್ಲವೆಂದು ಗ್ರಾಮಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next