Advertisement

ಆಧಾರ್‌ ಕಡ್ಡಾಯ ಸಡಿಲಿಕೆಗೆ ಚಿಂತನೆ: ಸಚಿವ ಎನ್‌.ಮಹೇಶ್‌

06:00 AM Sep 30, 2018 | |

ಬೆಂಗಳೂರು : ಶಾಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್‌ ಸಂಖ್ಯೆ ನೀಡಬೇಕು ಎಂಬ ನಿರ್ಧಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ವಲ್ಪ ಸಡಿಪಡಿಸುವ ಸಾಧ್ಯತೆ ಇದೆ.

Advertisement

ಆಧಾರ್‌ ಕಡ್ಡಾಯ ಸಂಬಂಧ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ಆದೇಶ ಸಂಬಂಧ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌, ಮಕ್ಕಳಿಗೆ ಆಧಾರ್‌ ಕಡ್ಡಾಯ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಮತ್ತು ಕಡ್ಡಾಯ ಮಾಡದೇ ಇರುವ ಬಗ್ಗೆಯೂ ಚಿಂತಿಸಲಿದ್ದೇವೆ. ಆಧಾರ್‌ ಲಿಂಕ್‌ ಮಾಡಿರುವುದರಿಂದ ಸರ್ಕಾರಿ ಯೋಜನೆಗಳನ್ನು ಸೂಕ್ತ ಫ‌ಲಾನುಭವಿಗಳಿಗೆ ಒದಗಿಸಲು ಪೂರಕವಾಗುತ್ತದೆ. ಇದರಿಂದ ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದಾದರೆ ಪರಿಷ್ಕರಿಸಲಿದ್ದೇವೆ  ಎಂದರು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ವ್ಯಾಪ್ತಿಯ ವಿದ್ಯಾರ್ಥಿಗಳ ದತ್ತಾಂಶ ಸಂಗ್ರಹಣೆ ಮತ್ತು ಅವರ ಮೇಲೆ ನಿಗ ಇಡಲು ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ(ಎಸ್‌ಎಟಿಎಸ್‌) ಅಡಿಯಲ್ಲಿ ವಿದ್ಯಾರ್ಥಿಗಳ ಮಾಹಿತಿ ಆನ್‌ಲೈನ್‌ ಅಪ್‌ಲೋಡ್‌ಗೆ ಆಧಾರ್‌ ಸಂಖ್ಯೆ ಕಡ್ಡಾಯ ಮಾಡಲಾಗಿತ್ತು. ಹೀಗಾಗಿ ರಾಜ್ಯದ ಬಹುತೇಕ ವಿದ್ಯಾರ್ಥಿಗಳು ಆಧಾರ್‌ ಸಂಖ್ಯೆಯನ್ನು ಈಗಾಗಲೇ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next