Advertisement

ಮತದಾನಕ್ಕಾಗಿ ವಿದೇಶದಿಂದ ಬಂದ ಯುವತಿ

01:08 PM Apr 23, 2019 | Team Udayavani |

ನರೇಗಲ್ಲ: ಸಮೀಪದ ತೋಟಗಂಟಿ ಗ್ರಾಮದ ನಿವಾಸಿ ವಿಜಯಲಕ್ಷ್ಮೀ ಹೊನಪ್ಪಗೌಡ್ರ ವಿದೇಶಿ ಕಂಪನಿಯಲ್ಲಿ ಇಂಜಿನಿಯರ್‌ಆಗಿ ಕರ್ವತ್ಯ ನಿರ್ವಹಿಸುತ್ತಿದ್ದು, ಏ. 23ರಂದು ನಡೆಯಲ್ಲಿರುವ ಲೋಕಸಭೆ ಚುನಾವಣೆ ಮತದಾನಕ್ಕಾಗಿ ಕೆನಡಾ ದೇಶದಿಂದ ಸ್ವಗ್ರಾಮಕ್ಕೆ ಆಗಮಿಸಿದ್ದಾಳೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.

Advertisement

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಲಕ್ಷ್ಮೀ, ದೇಶದಲ್ಲಿ ಸುಭದ್ರ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಪ್ರತಿ ಪ್ರಜೆಯು ತನ್ನ ಮತದಾನದ ಹಕ್ಕನ್ನು ಚಲಾಯಿಸುವ ಅವಶ್ಯವಿದೆ. ಉತ್ತಮ ಸರ್ಕಾರದೊಂದಿಗೆ ದೇಶದ ಅಭಿವೃದ್ಧಿಗೆ ಮತದಾರರು ಜಾಗೃತರಾಗಿಬೇಕು. ಪ್ರಜಾಪ್ರಭುತ್ವ ಮೌಲ್ಯ ಉಳಿಸಿಕೊಳ್ಳುವಲ್ಲಿ ಪ್ರತಿ ಪ್ರಜೆಯ ಜವಾಬ್ದಾರನಾಗಿದ್ದು, ಅಂತಹ ಜವಾಬ್ದಾರಿಯನ್ನು ನಾವು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಶಾಸಕ ಕಳಕಪ್ಪ ಬಂಡಿ, ನಗರ ಘಟಕದ ಅಧ್ಯಕ್ಷ ಉಮೇಶ ಸಂಗನಾಳಮಠ, ಪ.ಪಂ ಮಾಜಿ ಸದಸ್ಯ ಶಶಿಧರ ಸಂಕನಗೌಡ್ರ, ಯಲ್ಲಪ್ಪ ಮಣ್ಣೊಡ್ಡರ, ಬಸವರಾಜ ಕೊಟಗಿ, ಲೋಕೇಶ ಮಣ್ಣೊಡ್ಡರ, ಬವಸರಾಜ ವಂಕಲಕುಂಟಿ, ಪುಟ್ಟಣ್ಣ ಹೊಸಮನಿ, ನಿಂಗಪ್ಪ ಕಣವಿ, ಮುತ್ತಣ್ಣ ಕಡಗದ, ಶ್ರೀಕಾಂತ ಹೊನಪ್ಪಗೌಡ್ರ, ದೇವಪ್ಪ ಹೊನಪ್ಪಗೌಡ್ರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next