Advertisement
ತೊಂಭತ್ತು ಗ್ರಾಮದ ಹೆಂಗವಳ್ಳಿ ಮೂಡಬೆಟ್ಟಿನ ಬಾಬಣ್ಣ ಪೂಜಾರಿ ಹಾಗೂ ಗೀತಾ ಪೂಜಾರ್ತಿ ಅವರ ಪುತ್ರಿ 4 ಹರೆಯದ ತನುಶ್ರಿ “ಬೋನ್ ಮ್ಯಾರಿಯೋ’ ಎನ್ನುವ ಮಾರಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಪುಟ್ಟ ಬಾಲಕಿಯ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ. ಇದನ್ನು ತಿಳಿದ ನೆರಳು ಸಂಘಟನೆಯ ಸದಸ್ಯ ಹೆಬ್ರಿಯ ವಿಜೇಂದ್ರ ಆಚಾರ್ಯ ಅವರು ವೇಷ ಹಾಕಿ, ಈ ಮಗುವಿಗೆ ಧನ ಸಹಾಯ ಮಾಡಲು ಮುಂದಾಗಿದ್ದಾರೆ.
Related Articles
Advertisement
ನೀವೂ ನೆರವಾಗಬಹುದುಈ ಬಾಲೆಯ ಚಿಕಿತ್ಸೆಗೆ 18ರಿಂದ 20 ಲಕ್ಷ ರೂ. ಬೇಕಾಗಬಹುದು ಎಂದು ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಇವರದು ಬಡ ಕುಟುಂಬವಾಗಿದ್ದು, ಈ ಪುಟ್ಟ ಬಾಲೆ ತನುಶ್ರೀಗೆ ನೀವು ನೆರವಾಗಬಹುದು. ತನುಶ್ರೀ ತಂದೆ ಬಾಬಣ್ಣ ಪೂಜಾರಿ ಅವರ ಕೆನರಾ ಬ್ಯಾಂಕಿನ ವಿಳಾಸ ಹೀಗಿದೆ. ಬ್ಯಾಂಕ್ ಖಾತೆ ಸಂಖ್ಯೆ – 0647101057574, ಐಎಫ್ಸಿ ಕೋಡ್ – ಸಿಎನ್ಆರ್ಬಿ0000647, ಒಳ್ಳೆಯ ಕೆಲಸ ಮಾಡುತ್ತಿರುವ ಖುಷಿ
ರವಿ ಕಟಪಾಡಿಯಂತವರು ಶ್ರೀ ಕೃಷ್ಣಾಷ್ಟಮಿ, ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ವಿಭಿನ್ನ ವೇಷಗಳನ್ನು ಹಾಕಿ ಹಣ ಸಂಗ್ರಹಿಸಿ ಅಶಕ್ತರಿಗೆ ನೆರವಾಗುತ್ತದ್ದು, ನನ್ನ ಈ ಕೆಲಸಕ್ಕೆ ಅವರೇ ಪ್ರೇರಣೆ. ಇತ್ತೀಚೆಗೆ ನನ್ನ ಅಣ್ಣನ ಸ್ನೇಹಿತರೊಬ್ಬರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಜೀವರ¾ಣ ಹೋರಾಟದಲ್ಲಿದ್ದಾಗ ಆತನ ಚಿಕಿತ್ಸೆಗಾಗಿ ಈ ರೀತಿ ವೇಷ ಹಾಕಿ ಹಣ ಸಂಗ್ರಹಿಸಲು ಚಿಂತಿಸಿದ್ದೆ. ಆದರೆ ದುರದೃಷ್ಟಾವಶಾತ್ ಅವರು ಬದುಕುಳಿಯಲಿಲ್ಲ. ಆದರೆ ಅದೇ ವೇಷವನ್ನು ತನುಶ್ರೀ ಚಿಕಿತ್ಸೆಗಾಗಿ ಹಾಕುತ್ತಿದ್ದೇನೆ. ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎನ್ನುವ ಖುಷಿಯಿದೆ.
– ವಿಜೇಂದ್ರ ಆಚಾರ್ಯ,
ವೇಷ ಹಾಕಲು ಮುಂದಾದ ಯುವಕ