Advertisement

Drown: ಕೇರಳದ ವಯನಾಡ್‌ಗೆ ಪ್ರವಾಸ- ನೀರಿನಲ್ಲಿ ಮುಳುಗಿ ಯುವಕನ ಸಾವು

01:56 AM Oct 01, 2023 | Team Udayavani |

ಉಪ್ಪಿನಂಗಡಿ: ಪ್ರವಾಸಕ್ಕೆಂದು ಕೇರಳಕ್ಕೆ ತೆರಳಿದ್ದ ಹಿರೇಬಂಡಾಡಿ ಗ್ರಾಮದ ಯುವಕನೋರ್ವ ಅಲ್ಲಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸೆ.30ರಂದು ನಡೆದಿದೆ.

Advertisement

ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ ನಿವಾಸಿ ಇಬ್ರಾಹಿಂ ಅಡೆಕ್ಕಲ್‌ ಅವರ ಪುತ್ರ ಮುಹಮ್ಮದ್‌ ಅಝೀಮ್‌ (22) ಮೃತ ಯುವಕ. ಮೆಕಾನಿಕ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರುವ ಇವರು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಈದ್‌ ಮೀಲಾದ್‌ ಹಬ್ಬದ ಪ್ರಯುಕ್ತ ರಜೆಯಲ್ಲಿ ಊರಿಗೆ ಬಂದಿದ್ದರು. ಶುಕ್ರವಾರ ಕೇರಳದ ವಯನಾಡ್‌ಗೆ ಪ್ರವಾಸಕ್ಕೆ ತೆರಳಿದ್ದ ಇವರು ಅಲ್ಲಿ ರೂಮೊಂದರಲ್ಲಿ ತಂಗಿದ್ದು, ಮುಂಜಾನೆ ವೇಳೆ ಪಯ್ಯನ್ನೂರು ಸಮೀಪ ಕೆರೆಯೊಂದರಲ್ಲಿ ಸ್ನಾನಕ್ಕೆಂದು ಇಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟರೆನ್ನಲಾಗಿದೆ.
ಪೆರಿಯಾರು ಮೆಡಿಕಲ್‌ ಕಾಲೇಜಿನಲ್ಲಿ ಇವರ ಮೃತದೇಹವನ್ನಿರಿಸಲಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next