Advertisement

Puttur ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಯುವಕ ಸಾವು

11:25 PM Nov 15, 2023 | Team Udayavani |

ಪುತ್ತೂರು : ಇರ್ದೆ ಬೆಂದ್ರ್ತೀರ್ಥದ ಬಳಿ ಹೊಳೆಯಲ್ಲಿ ಸ್ನಾನಕ್ಕೆಂದು ಬಂದಿದ್ದ ಯುವಕ ಹೃದಯಾಘಾತದಿಂಂದ ಮೃತಪಟ್ಟ ಘಟನೆ ನ.14ರಂದು ಸಂಭವಿಸಿದೆ.

Advertisement

ವಳತ್ತಡ್ಕ ದೇವಸ್ಯ ಜಿನ್ನಪ್ಪ ಗೌಡ ಅವರ ಪುತ್ರ, ಬೊಳುವಾರಿನ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಜಿತ್‌ (27) ಮೃತರು. ಸ್ಥಳೀಯ ನೆಂಟರೊಬ್ಬರ ಮನೆಗೆ ಬಂದಿದ್ದ ಸುಜಿತ್‌ ಸ್ನಾನಕ್ಕೆಂದು ಹೊಳೆಗೆ ಇಳಿದ ವೇಳೆ ಹೃದಯಾಘಾತವಾಗಿದೆ.

ನೀರಿನಲ್ಲಿ ತೇಲುತ್ತಿದ್ದ ಈತನನ್ನು ತತ್‌ಕ್ಷಣ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆ ತರಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next