Advertisement

Yelburga: ಹಾವು ಕಚ್ಚಿ ಯುವ ರೈತ ಸಾವು

04:31 PM Aug 12, 2024 | Team Udayavani |

ಯಲಬುರ್ಗಾ: ತಾಲೂಕಿನ ದಮ್ಮೂರು ಗ್ರಾಮದಲ್ಲಿ ಹಾವು ಕಡಿದು ಯುವ ರೈತನೋರ್ವ ಸಾವಿಗೀಡಾದ ಘಟನೆ ಸೋಮವಾರ ( ಆ.12) ಮಧ್ಯಾಹ್ನ ನಡೆದಿದೆ.

Advertisement

ಸಿದ್ದಲಿಂಗಪ್ಪ ಫಕೀರಗೌಡ ಮಾಲಿಗೌಡ(38) ಹಾವು ಕಚ್ಚಿ ಮೃತ ಪಟ್ಟ ರೈತ.

ಕುಟುಂಬಸ್ಥರ ಜೊತೆ ಹೊಲದಲ್ಲಿ ಕೃಷಿ ಕಾರ್ಯದಲ್ಲಿ ಅಲಸಂದಿ ಬುಡ ಬಿಡಿಸುವ ಸಂದರ್ಭದಲ್ಲಿ ವಿಶ್ರಾಂತಿ ಪಡೆಯುವ ಸಲುವಾಗಿ ಅಲ್ಲೇ ಮಲಗಿದ್ದಾಗ ಹಾವು ಕಚ್ಚಿದೆ. ಚಿಕಿತ್ಸೆಗಾಗಿ ಯಲಬುರ್ಗಾದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವನ್ನಪ್ಪಿದ್ದಾನೆ.‌

ಈ ಕುರಿತು ಯಲಬುರ್ಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next