Advertisement

ತಂಗಿ ಪ್ರೀತಿಸಿದ ಯುವಕನ ಸಂಬಂಧಿಯ ಬೈಕ್‌ ಸುಟ್ಟರು 

06:25 AM Nov 24, 2018 | |

ಲಿಂಗಸುಗೂರು(ರಾಯಚೂರು): ತಂಗಿಯ ಪ್ರೀತಿಗೆ ವಿರೋಧಿಸಿ ಆಕೆಯ ಅಣ್ಣಂದಿರು ಪ್ರೀತಿಸಿದ ಯುವಕನ ಬೈಕ್‌ ಸುಟ್ಟು ಹಾಕಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

Advertisement

ತಾಲೂಕಿನ ಹಿರೇಉಪ್ಪೇರಿ ಗ್ರಾಮದ ಶ್ರೀಕಾಂತ ಎಂಬ ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಪ್ರೀತಿಗೆ ಶ್ರೀಕಾಂತನ ಪೋಷಕರು ಒಪ್ಪಿ ಮದುವೆ ಮಾಡುವ ವಿಚಾರವಾಗಿ ಯುವತಿಯ ಪೋಷಕರೊಂದಿಗೆ ಚರ್ಚಿಸಿದ್ದರು.

ಆದರೆ ಯುವತಿ ಪೋಷಕರು ಒಪ್ಪಿರಲಿಲ್ಲ. ಹೀಗಾಗಿ ಪ್ರೀತಿ ಮಾಡುವುದನ್ನು ನಿಲ್ಲಿಸುವಂತೆ ಶ್ರೀಕಾಂತನಿಗೆ ಎಚ್ಚರಿಕೆ ನೀಡಿದ್ದರು. ಆದರೆ ಇವರು ಪ್ರೀತಿ ಮುಂದುವರಿಸಿದ್ದರು. ಶ್ರೀಕಾಂತನ ಸೋದರ ಮಾವ ಕನಕರಾಯ ಆನಾಹೊಸೂರು ಅವರು ರಾಯಲ್‌ ಎನ್‌ μàಲ್ಡ್‌ ಬುಲೆಟ್‌ ಮೂಲಕ ಲಿಂಗಸುಗೂರಿಗೆ ಬಂದಿದ್ದರು. ಈ ವೇಳೆ ರಾಮನಗೌಡ, ಆದನಗೌಡ, ಬಸನಗೌಡ, ಸುವರ್ಣ ಎಂಬುವರು ಬುಲೆಟ್‌ಗೆ ಪೆಟ್ರೋಲ್‌ ಹಾಕಿ ಸುಟ್ಟಿದ್ದರು. ಕನಕರಾಯ ನೀಡಿದ ದೂರಿನನ್ವಯ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next